ಬೆಂಗಳೂರು: “ಟೊಮ್ಯಾಟೊ ಗುಜರಾತಿನಲ್ಲಿ ಕರ್ನಾಟಕಕ್ಕಿಂತ ದುಬಾರಿ ಇದೆ. ಅಕ್ಕಿ, ಬೇಳೆ, ಕಾಳುಗಳ ಬೆಲೆ ಇಡೀ ದೇಶದಲ್ಲೇ ಏರಿಕೆ ಕಾಣುತ್ತಿದೆ. ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣವಲ್ಲವೇ?, ಕೇಂದ್ರ ಸರ್ಕಾರ ಜಿಎಸ್ಟಿ ಕಡಿತಗೊಳಿಸಿ ಜನಸಾಮಾನ್ಯರ ಹೊರೆ ಇಳಿಸಬೇಕಲ್ಲವೇ? ಬಿಜೆಪಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ, ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಲಿ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: 17ರ ಬಾಲಕಿ, ಶಿಕ್ಷಕಿ ನಾಪತ್ತೆ: ಕುಟುಂಬದವರಿಂದ ಮತಾಂತರ ಆರೋಪ
“ದಿನಬಳಕೆಯ ವಸ್ತುಗಳ ಮೇಲೆ ಹಾಕಿರುವ ದುಬಾರಿ ಜಿಎಸ್ಟಿ ವಿರುದ್ಧ ಬಿಜೆಪಿ ನಾಯಕರು ಹೋರಾಟ ರೂಪಿಸಲಿ, ಕಾಂಗ್ರೆಸ್ ಪಕ್ಷವೂ ಬಿಜೆಪಿಯ ಹೋರಾಟಕ್ಕೆ ಬೆಂಬಲಿಸಲಿದೆ. ಬಿಜೆಪಿಗರು ರಾಜಕೀಯ ಬಿಟ್ಟು ನೈಜ ಜನಪರ ಕಾಳಜಿಯನ್ನು ಮೈಗೂಡಿಸಿಕೊಳ್ಳಲಿ” ಎಂದು ಟ್ವೀಟ್ ಮೂಲಕ ಬಿಜೆಪಿಯನ್ನು ಟೀಕಿಸಿದೆ.
ಟೊಮೊಟೊ ಗುಜರಾತಿನಲ್ಲಿ ಕರ್ನಾಟಕಕ್ಕಿಂತ ದುಬಾರಿ, ಅಕ್ಕಿ, ಬೇಳೆ, ಕಾಳುಗಳ ಬೆಲೆ ಇಡೀ ದೇಶದಲ್ಲೇ ಏರಿಕೆ ಕಾಣುತ್ತಿದೆ.
— Karnataka Congress (@INCKarnataka) July 5, 2023
ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣವಲ್ಲವೇ?
ಕೇಂದ್ರ ಸರ್ಕಾರ GST ಕಡಿತಗೊಳಿಸಿ ಜನಸಾಮಾನ್ಯರ ಹೊರೆ ಇಳಿಸಬೇಕಲ್ಲವೇ?@BJP4Karnataka ಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ… pic.twitter.com/8DPDhMQmw4