ಗುವಾಹಟಿ: ಅಸ್ಸಾಂನ ಕಚಾರ್ ಜಿಲ್ಲೆಯ 30 ಅಧಿಕಾರಿಗಳು ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಪತ್ರದಲ್ಲಿ ಶಾಸಕ ಕೌಶಿಕ್ ರೈ ವಿರುದ್ಧ ಆರೋಪಿಸಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕರ್ತವ್ಯದಲ್ಲಿರುವಾಗಲೇ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾಗ, ಬಿಜೆಪಿ ಶಾಸಕ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಧಿಕಾರಿಯೊಬ್ಬರನ್ನು ಥಳಿಸಬೇಕು ಎಂದು ಟೀಕಿಸಿ, ಕಟುಶಬ್ದ ಬಳಸಿದ್ದಾರೆ. ನಮಗೆ ಕೆಲಸ ಮಾಡಲು ಉತ್ತಮ ವಾತಾವರಣವನ್ನು ನಿರ್ಮಿಸಿಕೊಡಿ, ಇಂತಹವರಿಂದ ರಕ್ಷಿಸಿ ಎಂದು ದೂರಿನಲ್ಲಿ ಅಧಿಕಾರಿಗಳು ಅಲವತ್ತುಕೊಂಡಿದ್ದಾರೆ.
ಲಖಿಂಪುರದ ಬಿಜೆಪಿ ಶಾಸಕ ಕೌಶಿಕ್ ರಾಯ್, ಕೇವಲ ಇತರೆ ಅಧಿಕಾರಿಗಳಿಗೂ ಕೆಟ್ಟ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಕಂದಾಯ ಅಧಿಕಾರಿಗೆ ಅಕ್ಕಿ ಕಳ್ಳ ಎಂದು ಹೇಳಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಣಇಲಾಖೆ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳ ಕೆಲಸದಲ್ಲಿ ಮೂಗು ತೂರಿಸುತ್ತಿರುತ್ತಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕೆಂದು ಅವರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)
ಸಿಬ್ಬಂದಿ ವರ್ತನೆಯಿಂದ ಇಂಡಿಗೋ ಸಂಸ್ಥೆಗೆ ಬಿತ್ತು ಭಾರೀ ಮೊತ್ತದ ದಂಡ! ಕಾರಣ ಇಲ್ಲಿದೆ
ಹಾಟ್ ಫೋಟೋ ತೆಗೆಸಿದ ವೈದ್ಯೆಗೆ ಭಾರೀ ಸಂಕಷ್ಟ! ತನ್ನ ಜೀವನದಲ್ಲಿ ಹೀಗಾಗುತ್ತೆ ಎಂದು ಕನಸಲ್ಲೂ ಎಣಿಸಿರಲಿಲ್ಲ