More

    ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ

    ಪರಶುರಾಮಪುರ: ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಸಾರ್ವಜನಿಕರು ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೊರಲಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ಮಂಜುನಾಥ ಹೇಳಿದರು.

    ಕೊರಲಕುಂಟೆ ಗ್ರಾಮದ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಶ್ರಮದಾನ ಒಂದು ದಿನಕ್ಕೆ ಸೀಮಿತವಾಗಬಾರದು. ಇದು ನಿರಂತರ ಪ್ರಕ್ರಿಯೆ ಆಗಿರಬೇಕು. ಆಗ ಮಾತ್ರ ನಮ್ಮ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ ಎಂದರು.

    ಹೋಬಳಿ ವ್ಯಾಪ್ತಿಯ ಪಿ.ಮಹದೇವಪುರ, ಎನ್‌ಪಿಗೇಟ್, ಪಿಲ್ಲಹಳ್ಳಿ, ಕ್ಯಾದಿಗುಂಟೆ, ಸಿದ್ದೇಶ್ವರನದುರ್ಗ, ಪಿ.ಗೌರೀಪುರ, ವೃಂದಾವನಹಳ್ಳಿ, ಬೊಮ್ಮನಕುಂಟೆ, ಪಗಡಲಬಂಡೆ, ಜಾಜೂರು, ಕಾಮಸಮುದ್ರ, ತಿಪ್ಪಾರೆಡ್ಡಿಹಳ್ಳಿ, ಸಿರಿವಾಳ ಓಬಳಾಪುರ, ನಾಗಗೊಂಡನಹಳ್ಳಿ, ಚೌಳೂರು, ಬಸವೇಶ್ವರ ಕಾಲನಿ ಇತರೆಡೆಗಳಲ್ಲಿ ಸರಳವಾಗಿ ಕಾರ್ಯಕ್ರಮ ಜರುಗಿತು.

    ಉಪಾಧ್ಯಕ್ಷೆ ಮಂಜುಳಾ, ಗ್ರಾಪಂ ಸದಸ್ಯರಾದ ಲಕ್ಷ್ಮೀದೇವಿ, ವರಲಕ್ಷ್ಮೀ, ಕೆಂಗಪ್ಪ, ಶಿವಶಂಕರಪ್ಪ, ವೀರೇಂದ್ರ, ಕೆ.ಎಸ್.ಮಂಜುನಾಥ, ಮುಖ್ಯಶಿಕ್ಷಕ ಮಲ್ಲಯ್ಯ, ಪ್ರಕಾಶ, ನಿರ್ಮಲಾ, ನೇತ್ರಾವತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts