More

    ರಾಜಕೀಯ ಜೀವನದಲ್ಲಿ ವೈಯಕ್ತಿಕ ಸಂಬಂಧ ಅಡ್ಡಿ ಬರಬಾರದು, ಹೃದಯದಿಂದ ಬಿಎಸ್​ವೈಗೆ ಶುಭ ಕೋರುತ್ತೇನೆ: ಮಾಜಿ ಸಿಎಂ ಸಿದ್ದು

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ನಾನು ಶುಭಕೋರುತ್ತೇನೆ. ಅವರು ನೂರು ವರ್ಷಕ್ಕೂ ಅಧಿಕ ವರ್ಷ ಬಾಳಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಬಿಎಸ್​ವೈಗೆ ಹಾರೈಸಿದರು.

    ಸಿಎಂ ಬಿಎಸ್​ವೈ 78ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಪಾಲ್ಗೊಂಡು​ ಮಾತನಾಡಿದರು.

    ರಾಜಕೀಯ ಬೇರೆ, ಮಾನವ ಸಂಬಂಧವೇ ಬೇರೆ. ಹೀಗಾಗಿ ನಾನು ಒಪ್ಪಿಕೊಂಡು ಅಭಿನಂದನಾ ಸಮಾರಂಭಕ್ಕೆ ಬಂದೆ. ನಾನು ಎಷ್ಟು ವಿರೋಧ ಮಾಡಿದರೂ ಮನುಷ್ಯ ಸಂಬಂಧಕ್ಕೆ ಧಕ್ಕೆ ಬರಬಾರದು. ನಮ್ಮ ಸಿದ್ಧಾಂತವೇ ಬೇರೆ, ಬಿಜೆಪಿ ಮತ್ತು ಬಿಎಸ್​ವೈ ಸಿದ್ಧಾಂತವೇ ಬೇರೆಯಾಗಿದೆ. ಆದರೆ, ನಾವು ಜನರ ಮುಂದೆ ನಮ್ಮ ಸಿದ್ಧಾಂತ ಇಡುತ್ತೇವೆ. ಕೊನೆಗೆ ಜನರೇ ಸಿದ್ಧಾಂತವನ್ನು ಆಯ್ಕೆ ಮಾಡ್ತಾರೆ ಎಂದರು.

    ರಾಜಕೀಯ ಜೀವನದಲ್ಲಿ ವೈಯಕ್ತಿಕ ಸಂಬಂಧಗಳು ಅಡ್ಡಿ ಬರಬಾರದು. ನಾನು ಹೃದಯಪೂರ್ವಕವಾಗಿ ಬಿಎಸ್​ವೈಗೆ ಶುಭಾಶಯ ಕೋರುತ್ತೇನೆ. ಅವರು ನೂರು ವರ್ಷಕ್ಕೂ ಅಧಿಕ ವರ್ಷ ಬಾಳಲಿ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಎಷ್ಟು ವರ್ಷ ಕ್ರೀಯಾಶೀಲನಾಗಿ ಬದುಕಿದ ಎಂಬುದು ಮುಖ್ಯ ಎಂದು ತಿಳಿಸಿದರು.

    ಬಿಎಸ್​ವೈ ನೇರವಾಗಿ ಸಿಎಂ ಸ್ಥಾನಕ್ಕೆ ಬರಲಿಲ್ಲ, ಅವರು ಸಾಮಾನ್ಯ ಕುಟುಂಬದಿಂದ ಬಂದು, ಸ್ವಂತ ಪರಿಶ್ರಮ, ಹೋರಾಟದಿಂದ ಸಿಎಂ ಆದವರು. ಹೋರಾಟ ಬದುಕಿನಿಂದ ಬಂದವರಿಗೆ ಜನರ ಬದುಕು ಅರ್ಥ ಆಗುತ್ತದೆ. ರಾಜ್ಯದ ರಾಜಕೀಯ ಅರ್ಥ ಮಾಡಿಕೊಂಡವರಲ್ಲಿ ಕೆಲವೇ ಕೆಲವು ರಾಜ್ಯಕಾರಣಿಗಳಲ್ಲಿ ಬಿಎಸ್​ವೈ ಒಬ್ಬರು. ಸಿಎಂ ಆದವರಿಗೆ ಒತ್ತಡಗಳು ಇರೋದು ಸಹಜ. ಒತ್ತಡ ಸಹಿಸಿಕೊಳ್ಳುವ ಶಕ್ತಿ ಬಿಎಸ್​ವೈ ಅವರಿಗೆ ಬರಲಿ ಎಂದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts