More

    ಮೃತ ಬಿಜೆಪಿ ಶಾಸಕನ ಜೇಬಿನಲ್ಲಿದ್ದ ಚೀಟಿ ಬಿಚ್ಚಿಟ್ಟ ಸತ್ಯ; ಓರ್ವ ಅರೆಸ್ಟ್​..ಇನ್ನೊಬ್ಬನಿಗಾಗಿ ಹುಡುಕಾಟ

    ಕೋಲ್ಕತ್ತ: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದೇಬೇಂದ್ರನಾಥ್​ ರಾಯ್​ ಅವರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಶ್ಚಿಮ ಬಂಗಾಳ ಸಿಐಡಿ ಇಂದು ಓರ್ವನನ್ನು ಬಂಧಿಸಿದೆ.
    ದೇಬೇಂದ್ರನಾಥ್​ ರಾಯ್​ ಅವರು ಎರಡು ದಿನಗಳ ಹಿಂದೆ ಉತ್ತರ ದಿನಜ್​ಪುರ ಜಿಲ್ಲೆಯ ತಮ್ಮ ನಿವಾಸದ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಹೆಮ್ಟಾಬಾದ್​ ಶಾಸಕ ದೇಬೇಂದ್ರನಾಥ್​ ರಾಯ್​ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್​ ಪತ್ತೆಯಾಗಿದ್ದು, ಅದರಲ್ಲಿ ನಿಲಯ್​ ಸಿನ್ಹಾ ಎಂಬುವನ ಹೆಸರು ಇತ್ತು. ಈ ನಿಲಯ್​ ಸಿನ್ಹಾನನ್ನು ಮಾಲ್ಡಾದ ಇಂಗ್ಲಿಷ್​ ಬಜಾರ್​ ಬಳಿ ಸ್ಥಳೀಯ ಪೊಲೀಸರು ಬಂಧಿಸಿ, ಸಿಐಡಿ ವಶಕ್ಕೆ ನೀಡಿದ್ದಾರೆ. ಈತನನ್ನು ಇಂದು ಸಿಐಡಿ ಅಧಿಕೃತವಾಗಿ ಬಂಧಿಸಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ರೇ ಪೋಸ್ಟ್‌ಮಾರ್ಟಮ್‌ ರಿಪೋರ್ಟ್‌ ಹೇಳಿದ್ದೇನು?

    ಡೆತ್​ನೋಟ್​ನಲ್ಲಿ ಮಹಬುದ್​ ಅಲಿ ಎಂಬ ಇನ್ನೊಂದು ಹೆಸರಿದ್ದು, ಆತನಿಗಾಗಿ ಸಿಐಡಿ ಹುಡುಕುತ್ತಿದೆ. ಹಾಗೇ, ಸೆರೆ ಸಿಕ್ಕ ನಿಲಯ್​ ಸಿಂಗ್​ನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ದೇಬೇಂದ್ರನಾಥ್​ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಇನ್ನೂ ಗೊಂದಲದ ವಿಚಾರವಾಗಿದೆ. ಅವರ ಜೇಬಿನಲ್ಲಿ ಸಣ್ಣ ಚೀಟಿಯೊಂದು ಸಿಕ್ಕಿದ್ದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

    ಬಿಜೆಪಿ ಶಾಸಕನ ಸಾವಿಗೆ ಕಾರಣ ಯಾರು? ಜೇಬಲ್ಲಿ ಸಿಕ್ಕ ರಹಸ್ಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts