ಚಿತ್ರದುರ್ಗ: ನಗರದ ಬಿ.ಎಲ್.ಗೌಡ ಲೇಔಟ್ ನಿವಾಸಿ ಸಿ.ರಾಣಿ ಬಾಲಕೃಷ್ಣ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ.
ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ.ವಿರೂಪಾಕ್ಷಿ ಪೂಜಾರಳ್ಳಿ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಜಿಲ್ಲೆಯ ಕೆರೆಗಳು; ಚಾರಿತ್ರಿಕ ಅಧ್ಯಯನ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.