ಚಿತ್ರದುರ್ಗ: ತಾಲೂಕಿನ ತುರುವನೂರಲ್ಲಿ ಫೆ.10ರಂದು ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದೆ. ಪ್ರತಿ ವರ್ಷವೂ ಶ್ರೀ ಸ್ವಾಮಿ ರಥೋತ್ಸವದೊಂದಿಗೆ ಮುಳ್ಳು ಪಲ್ಲಕ್ಕಿ ಪವಾಡವೂ ನಡೆಯಲಿದೆ.
ಮಂಗಳ ವಾದ್ಯ, ಪಂಜಿನ ಸೇವೆ, ಡೊಳ್ಳು ಕುಣಿತ, ಕೋಲಾಟ, ನಂದಿಧ್ವಜ ಕುಣಿತ ಮೊದಲಾದ ತಂಡಗಳ ನೂರಾರು ಕಲಾವಿದರು ಹಾಗೂ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.