More

    ಕರೊನಾ ಕುರಿತು ಶರಣರು ವಾಚಿಸಿದ ಕವನ

    ಹೆದರದಿರು ಆಧುನಿಕ ಮಾನವ
    ಕಂಗೆಡದಿರು ಎಲವೊ ಜೀವ ॥ ಪ ॥

    ಕರೊನಾ ವೈರಸ್‌ನಿಂದ ನೀ ಬಲು ಕಂಗಾಲಾಗಿರುವೆಯಾ !
    ಉದ್ಯೋಗ ವ್ಯಾಪಾರ ಕುಂಠಿತವಾಯಿತೆಂದು ಚಿಂತಿಸಿರುವೆಯಾ !
    ಮನೆಯೊಳಗೆ ಮುದ್ದೆಯಂತೆ ಕುಳಿತು ಕಾಲ ನೂಕುತಿರುವೆಯಾ !
    ಜೀವಭಯದಿಂದ ಕುಬ್ಜನಾಗಿ ಕೈಹೊತ್ತು ನೀನು ಕುಳಿತಿರುವೆಯಾ ! ॥ 1 ॥

    ಶಾಲಾ ಕಾಲೇಜು ವಿದ್ಯಾಲಯ ಅವು ನಡೆಸುವ ಪರೀಕ್ಷಾ ಪದ್ಧತಿ
    ಜಾತ್ರೆ ಉತ್ಸವ ಮದುವೆ ರಥೋತ್ಸವ ಮುಂತಾದವುಗಳ ರದ್ಧತಿ
    ಕಾಣದ ಕರೊನಾ ವೈರಸ್‌ನಿಂದ ಜಗತ್ತಿನಾದ್ಯಂತ ತುರ್ತುಪರಿಸ್ಥಿತಿ
    ಹಿಂದೆಂದಿಗೂ ಕಂಡರಿಯದ ಕೇಳರಿಯದ ದಯನೀಯ ಸ್ಥಿತಿ ॥ 2 ॥

    ಮರೆಯದಿರು ದಿನದೊಳು ಮೂರ‌್ನಾಲ್ಕು ಬಾರಿ ಕೈತೊಳೆಯುವುದು
    ಆಲಿಂಗನ ಹಸ್ತಲಾಘವಕೆ ಬದಲು ಲೇಸು ಕರ ಮುಗಿಯುವುದು
    ಈ ದಿನದೊಳು ಅತಿ ಕಡ್ಡಾಯವೊ ಮುಖಕೆ ಮಾಸ್ಕ್ ಧರಿಸುವುದು
    ಇದೇ ರೀತಿ ಮುನ್ನೇಚ್ಚರಿಕೆ ವಹಿಸಿದರೆ ಯಾವ ತೊಂದರೆ ಇರದು ॥ 3 ॥

    ಸೋಂಕು ಪೀಡಿತರ ಸಂಪರ್ಕದಿಂದ ದೂರ ಇರುವುದ ಮರೆಯದಿರಿ
    ಕೆಮ್ಮುವಾಗ ಸೀನುವಾಗ ಕರವಸ್ತ್ರ ಟಿಶ್ಯು ಪೇಪರ್ ತಪ್ಪದೆ ಬಳಸಿರಿ
    ಕಣ್ಣು ಮೂಗು ಬಾಯಿ ಸ್ಪರ್ಶಿಸುವುದ ತಪ್ಪಿಸುತ ಸ್ವಚ್ಛತೆ ಕಾಯ್ದುಕೊಳ್ಳಿರಿ
    ಮುಂಜಾಗ್ರತೆ ವಹಿಸಿದರೆ ಕರೊನಾ ವೈರಸ್‌ನಿಂದ ಭಯವಿಲ್ಲ ತಿಳಿಯಿರಿ ॥ 4 ॥

    ನಾವು ವಾಸಿಸುತ್ತಿರುವುದು ಏಷ್ಯ ಖಂಡಕೆ ಸೇರಿದ ಭವ್ಯ ಭಾರತದಲ್ಲಿ
    ಪ್ರಾಚೀನ ಸಂಸ್ಕೃತಿ, ಆಹಾರ, ವಿಜ್ಞಾನ, ವೈದ್ಯಕೀಯ ಜೀವನ ಪದ್ಧತಿಯಲ್ಲಿ
    ಸಮಭಾಜಕ ರೇಖೆಯು ಹಾಯ್ದು ಹೋಗಿರುವ ಉಷ್ಣವಲಯದಲ್ಲಿ
    ರೋಗ ನಿರೋಧಕ ಶಕ್ತಿಯು ನಮ್ಮೊಳಗೆ ಇರುವಾಗ ಭಯವು ಇನ್ನೆಲ್ಲಿ ॥ 5 ॥

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts