ಚಿತ್ರದುರ್ಗ: ಆಸ್ತಿ ವಿಚಾರಕ್ಕಾಗಿ ದಾಯಾದಿ ಮಹಿಳೆಯರು ಜಗಳ ಆಡಿಕೊಂಡು, ಓರ್ವ ಮಹಿಳೆ ಗಂಭೀರ ಹಲ್ಲೆಗೊಳಗಾಗಿ, ಕೊನೆಯುಸಿರೆಳೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಿ.ಓಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಒಂದೇ ಸರ್ವೆ ನಂಬರ್ನಲ್ಲಿ 5 ಜನ ಆಸ್ತಿ ಹಂಚಿಕೊಂಡಿದ್ದರು. ಅದನ್ನು ಅಧಿಕೃತ ಮಾಡಲೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಷ್ಟರೊಳಗೆ ದಾಯಾದಿಗಳು ಜಗಳ ಆರಂಭಿಸಿದ್ದಾರೆ. ಒಂದೇ ಮನೆಯ ಸೊಸೆಯಂದಿರಾದ ಮಂಜಮ್ಮ, ಸುಮಕ್ಕ, ನೀಲಮ್ಮ ಮತ್ತು ವಿಶಾಲಾಕ್ಷಿ ನಡುವೆ ಜಗಳ ನಡೆದಿದೆ. ಮಂಜಮ್ಮನನ್ನು ಉಳಿದ ಮೂವರು ಮಹಿಳೆಯರು ಹಿಡಿದು ಥಳಿಸಿದ್ದಾರೆ.
ಜಗಳದಲ್ಲಿ ಮಂಜಮ್ಮ ತೀವ್ರವಾಗಿ ಗಾಯಾಳುವಾಗಿದ್ದಾರೆ. ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಸುಮಕ್ಕ, ನೀಲಮ್ಮ, ವಿಶಾಲಾಕ್ಷಿ, ಚಿದಾನಂದಪ್ಪ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಆಸ್ತಿಗಾಗಿ ಜಡೆ ಫೈಟ್! ವಾರ್ಗಿತ್ತಿಯರ ಜಗಳಕ್ಕೆ ಮಹಿಳೆ ಬಲಿ…!
ಚಳ್ಳಕೆರೆ ತಾಲೂಕಿನ ಪಿ.ಓಬನಹಳ್ಳಿ ಗೊಲ್ಲರಹಟ್ಟಿಯಲ್ಲಿಯಲ್ಲಿ ಆಸ್ತಿಯ ವಿಚಾರದಲ್ಲಿ ನಡೆದ ಫೈಟ್ ಇದು. ಈ ಫೈಟ್ನಿಂದಾಗಿ ಓರ್ವ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ https://t.co/JCps2efeGV ನೋಡಿ.. pic.twitter.com/x96WoOxEph— Vijayavani (@VVani4U) March 15, 2021
ಹೆಂಡತಿಗೆ ಬ್ರೈನ್ ಟ್ಯೂಮರ್; ಚಿಕಿತ್ಸೆ ಕೊಡಿಸಲಾಗದ ಗಂಡ ಮಾಡಿದ್ದೇನು ಗೊತ್ತಾ?