More

    ಸ್ಥಳ ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಿ

    ಗುರುಗುಂಟಾ: ಪೈದೊಡ್ಡಿ ಗ್ರಾಪಂ ಕಟ್ಟಡ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಪಿಡಿಒ ಭೀಮಣ್ಣಗೆ ತಾಪಂ ಇಒ ಅಮರೇಶ ಯಾದವ್ ಪತ್ರ ಬರೆದು ಕ್ರಮಕ್ಕಾಗಿ ಸೂಚಿಸಿದ್ದಾರೆ.

    ‘ಪೈದೊಡ್ಡಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ವಿಘ್ನ’ ಶೀರ್ಷಿಕೆಯಡಿ ಅ.23 ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ನಿಯಮಾನುಸಾರ ಕ್ರಮಕೈಗೊಂಡು ದೂರುದಾರ ಭೀಮರಾಯಗೌಡಗೆ ಹಿಂಬರಹ ನೀಡಬೇಕು. ಈ ಕುರಿತು ತಾಪಂ ಕಚೇರಿಗೆ ವರದಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಕ್ರಮಕೈಗೊಳ್ಳಿ

    ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 30 ವರ್ಷಗಳ ಹಿಂದೆ ಕೆಲವು ಷರತ್ತು ಆಧರಿಸಿ ಜಮೀನಿನ ಮಾಲೀಕ ಭೀಮರಾಯಗೌಡ ಅವಕಾಶ ಕಲ್ಪಿಸಿದ್ದರು. ಆದರೆ, ಷರತ್ತುಗಳಿಗೆ ಇಲಾಖೆಯಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ.

    ಈ ಕುರಿತು ಭೀಮರಾಯಗೌಡ 2023ರ ಆ.23 ರಂದು ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಾಪಂಗೆ ದೂರು ಸಲ್ಲಿಸಿದ್ದರು. ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಅಧಿಕಾರಿಗಳು ಪಿಡಿಯೊಗೆ ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts