ಚಾಮರಾಜನಗರ: ಈ ಬಾರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ನಮ್ಮ ಜಮೀನುಗಳಲ್ಲಿ ಬೆಳೆದಿದ್ದ ಸಾವಿರ ಏಲಕ್ಕಿ ಬಾಳೆಗಿಡ ನಾಶವಾಗಿವೆ ಎಂದು ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ ರೈತ ಬಸವಣ್ಣ ತಿಳಿಸಿದ್ದಾರೆ.
ಬಿರುಗಾಳಿ ಮಳೆಗೆ ಬೆಳೆ ನಷ್ಟದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವವ ಅವರು, ಪ್ರತಿ ಗಿಡದಲ್ಲಿ ಕನಿಷ್ಠ ಹತ್ತು ಕೆಜಿ ಬಾಳೆ ಬೆಳೆದು, ಕೆಜಿಗೆ ಮೂವತ್ತು ರೂ. ದರದಲ್ಲಿ ಮಾರಾಟ ಮಾಡಿದ್ದರೆ ಮೂರು ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಸರ್ಕಾರ ಎಕರೆಗೆ ಹತ್ತು ಸಾವಿರ ರೂ. ಬೆಳೆ ಪರಿಹಾರ ನೀಡಿದರೆ ಸಾಲುವುದಿಲ್ಲ. ಆದ್ದರಿಂದ ನೈಜ ನಷ್ಟ ಭರಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.