More

    ಕೆರೆಯಲ್ಲಿ ಮುಳುಗಿ ಬಾಲಕ ಸಾವು

    ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಬುಧವಾರ ಕೆರೆಯಲ್ಲಿ ಮುಳುಗಿ ಬಾಲಕ ಸಾವಿಗೀಡಾಗಿದ್ದಾನೆ.

    ಗ್ರಾಮದ ಮಹದೇವಶೆಟ್ಟಿ ಎಂಬುವರ ಮಗ ವಿನೋದ್(20) ಮೃತ ಬಾಲಕ. ಯುಗಾದಿ ಹಬ್ಬದ ಮರುದಿನ ಗ್ರಾಮದಲ್ಲಿ ಓಕುಳಿ ಉತ್ಸವ ಹಿನ್ನೆಲೆಯಲ್ಲಿ ಯುವಕರು ಓಕುಳಿ ಆಡುತ್ತಿದ್ದರು. ಈ ವೇಳೆ ಬಟ್ಟೆ ಹಾಗೂ ಮೈಗೆ ಮೆತ್ತಿಕೊಂಡ ಬಣ್ಣವನ್ನು ತೊಳೆದುಕೊಳ್ಳಲು ವಿನೋದ್ ತನ್ನ ಸ್ನೇಹಿತ ಸಾಗರ್ ಎಂಬಾತನ ಜತೆ ಲಕ್ಕೂರು ಸಮೀಪದ ಕೆರೆಯ ಬಳಿ ಹೋಗಿದ್ದ. ಈ ವೇಳೆ ಕೆರೆಯಲ್ಲಿ ಇಳಿದಾಗ ಆಳವಾದ ಗುಂಡಿಗೆ ಜಾರಿಬಿದ್ದು ಮುಳುಗಿದ್ದಾನೆ. ಇತ್ತೀಚೆಗಷ್ಟೇ ಕೆರೆಯಲ್ಲಿ ಜೆಸಿಬಿಯಿಂದ ಮಣ್ಣನ್ನು ತೆಗೆಯಲಾಗಿತ್ತು ಎನ್ನಲಾಗಿದೆ.

    ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸುಮಾರು 3 ಗಂಟೆಗಳ ಕಾಲ ಶೋಧ ನಡೆಸಿ ಮೃತದೇಹ ಮೇಲೆತ್ತಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಚಾಮರಾಜನಗರಕ್ಕೆ ಒಯ್ಯಲಾಯಿತು. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts