More

    ಮಾಚಿದೇವರ ಬದುಕು ಆದರ್ಶನೀಯ

    ಚಳ್ಳಕೆರೆ: ಹನ್ನೆರಡನೇ ಶತಮಾನದಲ್ಲಿ ಕಾಯಕನಿಷ್ಠೆಯ ಮಡಿವಾಳ ಮಾಚಿದೇವರ ಬದುಕು ಆದರ್ಶನೀಯ, ಅನುಕರಣೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

    ತಾಲೂಕು ಆಡಳಿತ ಬುಧವಾರ ಹಮ್ಮಿಕೊಂಡಿದ್ದ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕುಲಕಸುಬಿನಿಂದ ಶೋಚನೀಯ ಪರಿಸ್ಥಿತಿಯಲ್ಲಿರುವ ಮಡಿವಾಳ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಆಗಬೇಕು ಎಂದರು.

    ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಾಮಾಜಿಕ ಬದಲಾವಣೆ ಆಗಬೇಕಿದೆ. ಸರ್ಕಾರಿ ಸೌಲಭ್ಯ ಪಡೆಯಲು ಸಮುದಾಯದಲ್ಲಿ ಜಾಗೃತಿ ಬಹಳ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

    ಮಡಿವಾಳ ಸಂಘದ ತಾಲೂಕಾಧ್ಯಕ್ಷ ಎನ್.ಮಂಜುನಾಥ ಮಾತನಾಡಿ, ಮಾಚಿದೇವರ ಜಯಂತಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಪ್ರಗತಿ, ಬದಲಾವಣೆಗೆ ಆಧಾರ ಆಗಬೇಕು. ಅಭಿವೃದ್ಧಿ ನಿಗಮವನ್ನು ಸರ್ಕಾರ ಬಲಪಡಿಸಬೇಕು. ಸಮುದಾಯವನ್ನು ಎಸ್‌ಸಿ ಮೀಸಲಿಗೆ ಸೇರಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

    ಗ್ರೇಡ್-2 ತಹಸೀಲ್ದಾರ್ ಸಂಧ್ಯಾ, ಪೌರಾಯುಕ್ತ ಬಿ.ಚಂದ್ರಪ್ಪ, ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್, ತಾಲೂಕು ಮಡಿವಾಳ ಸಂಘದ ಗೌರವಾಧ್ಯಕ್ಷ ಎಂ.ನಾಗರಾಜ, ಉಪಾಧ್ಯಕ್ಷ ಪುಟ್ಟಲಿಂಗಪ್ಪ, ಕಾರ್ಯದರ್ಶಿ ಕುಶಾಲಪ್ಪ, ಖಜಾಂಚಿ ಆರ್ಟ್‌ಸನ್ ಪ್ರಕಾಶ್, ಸಹಕಾರ್ಯದರ್ಶಿ ವಿ.ವಿಜಯ್, ಅಂಜಿನಪ್ಪ, ಶೈಲಮ್ಮ, ರಂಗಣ್ಣ, ಎನ್.ವೀರೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts