More

    ಸ್ವಂತ ಮನೆಯಲ್ಲಿಯ ಹಣ,ಬಂಗಾರ ಕದ್ದ ಸಹೋದರರು

    ಚಡಚಣ: ಸಮೀಪದ ಅಗಸನಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣ ಭೇದಿಸಿರುವ ಹೊರ್ತಿ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿ, ಸಾವಿರಾರು ರೂ. ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ
    ಆ. 3ರಂದು ಅಗಸನಾಳದ ಪ್ರಶಾಂತ ಬಲಭೀಮ ಕೋಳಿ ಎಂಬುವವರ ಮನೆಯಲ್ಲಿ ಕಳ್ಳತನವಾದ ಬಗ್ಗೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂಡಿ ಸಿಪಿಐ ರಾಜಶೇಖರ ಬಡದೇಸಾರ ಹಾಗೂ ಹೊರ್ತಿ ಪಿಎಸ್‌ಐ ಎಂ.ಬಿ. ಬಿರಾದಾರ ತನಿಖೆ ಕೈಗೊಂಡು ಪ್ರಕರಣ ಭೇದಿಸಿದಾಗ ಅಚ್ಚರಿಯೊಂದು ಕಾದಿತ್ತು.
    ದೂರುದಾರ ಪ್ರಶಾಂತನಿಗೆ ಜೂಜಾಟ ಆಡುವ ಅಭ್ಯಾಸವಿದ್ದು, ಇದರಿಂದಾಗಿ ಗ್ರಾಮದಲ್ಲಿ ಸಾಕಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸಾಲಗಾರರ ಕಾಟ ವಿಪರೀತವಾದಾಗ ತನ್ನ ಕಿರಿಯ ಸಹೋದರ ಶಿವಾನಂದನ ಜತೆಗೂಡಿ ರಾತ್ರಿ ಸಮಯದಲ್ಲಿ ತಮ್ಮ ಮನೆಯಲ್ಲೇ ನಗದು, ಆಭರಣ ಎಗರಿಸಿ ಪೊಲೀಸರ ದಾರಿ ತಪ್ಪಿಸುವ ಸಲುವಾಗಿ ಕಳ್ಳತನದ ನಾಟಕವಾಡಿರುವುದು ಬೆಳಕಿಗೆ ಬಂದಿದೆ.

    ಬಂಧಿತರಿಂದ 17.5 ಗ್ರಾಂ. ಚಿನ್ನ ಹಾಗೂ 51 ಸಾವಿರ ರೂ. ನಗದು ಜಪ್ತಿ ಮಾಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಠಾಣೆ ಸಿಬ್ಬಂದಿ ವಿ.ಜಿ. ಶಿರಮಗೊಂಡ, ಪಿ.ಡಿ. ಹಳ್ಳಿ, ಆರ್.ಎನ್. ರಾಠೋಡ, ಜೈ ಭೀಮ ಶಾಂತಗಿರಿ, ಎಸ್.ಎಸ್. ಹುಣಸ್ಯಾಳ, ಮಹಾದೇವ ಹೊಸಮನಿ, ಎಂ.ಬಿ. ಆಕಳೆ, ಎ.ಆರ್. ಮಕಾನದಾರ, ಪಿ.ಬಿ. ಬಿರಾದಾರ, ಸಂತೋಷ ಯಡಹಳ್ಳಿ, ಪಿ.ಎಸ್. ಶೇಖ, ಎನ್.ಎ. ಮೆಟಗಾರ, ಸಂಗಮೇಶ ಗೂಗಿಹಾಳ ಹಾಗೂ ಗೌಸ ಮುಲ್ಲಾ ಪಾಲ್ಗೊಂಡಿದ್ದರು.
    ಹೊರ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸ್ವಂತ ಮನೆಯಲ್ಲಿಯ ಹಣ,ಬಂಗಾರ ಕದ್ದ ಸಹೋದರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts