More

    ಕಾರಿಗೆ ಗುದ್ದಿದ ಟ್ರ್ಯಾಕ್ಟರ್: ದೇವಿ ದರ್ಶನ ಪಡೆದು ಹೊರಟಿದ್ದ ನವ ದಂಪತಿ ಕೂದಲೆಳೆ ಅಂತರದಲ್ಲಿ ಪಾರು

    ಶಿವಮೊಗ್ಗ: ಮದುವೆ ಆಗಿ ಇನ್ನೂ ಅರಿಶಿನ ಸರಿಯಾಗಿ ಮಾಸಿಲ್ಲ, ಕಾರಿಗೆ ಅಂಟಿಸಿದ್ದ ಸ್ಟಿಕ್ಕರ್ ಕೂಡ ತೆಗೆದಿಲ್ಲ. ದೇವಿ ದರ್ಶನಕ್ಕೆ ಹೊರಟಿದ್ದ ನವ ದಂಪತಿಗೆ ಗಂಡಾಂತರವೊಂದು ಎದುರಾಗಿದ್ದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹೌದು, ಭಾನುವಾರ ಮಧ್ಯಾಹ್ನ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ. 

    ಹಿರೇಕೆರೂರಿನ ನಾಗರಾಜ್ ಮತ್ತು ಜಯಲಕ್ಷ್ಮೀ ಇತ್ತೀಚೆಗಷ್ಟೇ ಮದುವೆಯಾಗಿದ್ದು, ಸೊರಬ ತಾಲೂಕಿನ ಚಂದ್ರಗುತ್ತಿಯ ದೇವಿ ದರ್ಶನಕ್ಕೆ ಭಾನುವಾರ ಕಾರಿನಲ್ಲಿ ಬಂದಿದ್ದರು. ದೇವಿ ದರ್ಶನ ಪಡೆದು ಇನ್ನೇನು ಹೊರಟಿದ್ದ ಜೋಡಿಗೆ ಎದುರಿನಿಂದ ಲೈಟ್ ಕಂಬಗಳನ್ನು ಹೊತ್ತು ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. 

    ಟ್ರ್ಯಾಕ್ಟರ್ ಗುದ್ದಿದ ರಬಸಕ್ಕೆ ದಂಪತಿ ಪ್ರಾಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಕಾರಿನ ಮುಂದಿನ ಗ್ಲಾಸು, ಟಾಪು, ಮುಂಭಾಗದ ಭಾಗ ನುಜ್ಜು ಗುಜ್ಜಾಗಿದೆ. ಇಷ್ಟು ದೊಡ್ಡವಾದ ಅವಘಡ ಸಂಭವಿಸಿದರೂ ನವದಂಪತಿಗೆ ಯಾವ ಅಪಾಯವೂ ಸಂಭವಿಸಿಲ್ಲ.

    ಮದುವೆ ಆದ ಹೊಸದರಲ್ಲಿ ಚಂದ್ರಗುತ್ತಿ ದೇವಸ್ಥಾನಕ್ಕೆ ಬಂದಿದ್ದು ತಾಯಿ ಚಂದ್ರಗುತ್ತಿ ದೇವಿಯ ಕೃಪಾಕಟಾಕ್ಷದಿಂದ ಬಜಾವ್ ಆಗಿದ್ದಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts