ಲಖನೌ: ಆಡಿರುವ ಮೊದಲೆರಡೂ ಆವೃತ್ತಿಗಳಲ್ಲಿ ಪ್ಲೇಆಫ್ಗೇರಿದ್ದರೂ, ಫೈನಲ್ಗೇರಲು ಸಾಧ್ಯವಾಗಿಲ್ಲ. ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ತಂಡ ಬಹುತೇಕ ಕಳೆದ ಅವೃತ್ತಿಯ ಪ್ರಮುಖ ಆಟಗಾರರನ್ನೇ ಒಳಗೊಂಡಿದೆ. ಭರ್ಜರಿ ಫಾರ್ಮ್ನಲ್ಲಿರುವ ಕರ್ನಾಟಕದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ರಾಜಸ್ಥಾನದಿಂದ ವರ್ಗಾವಣೆಗೊಂಡಿರುವುದು ತಂಡದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತಂದಿದೆ. ಆಲ್ರೌಂಡರ್ ಕೆ. ಗೌತಮ್ ತಂಡದಲ್ಲಿರುವ ಮತ್ತೋರ್ವ ಕನ್ನಡಿಗರಾಗಿದ್ದಾರೆ.
ಇತ್ತೀಚೆಗೆ ಆಸೀಸ್ನಲ್ಲಿ ಪದಾರ್ಪಣೆಯ ಟೆಸ್ಟ್ ಸರಣಿಯಲ್ಲಿ ಗಮನಾರ್ಹ ನಿರ್ವಹಣೆ ತೋರಿದ ವೆಸ್ಟ್ ಇಂಡೀಸ್ ಯುವ ವೇಗಿ ಶಮರ್ ಜೋಸೆಫ್ ಸೇರ್ಪಡೆ ಮತ್ತೊಂದು ಕುತೂಹಲಕಾರಿ ಅಂಶ. ಸ್ಥಿರ ನಿರ್ವಹಣೆ ತೋರುವಲ್ಲಿ ಯಶಸ್ವಿಯಾದರೆ ತಂಡ 3ನೇ ಪ್ರಯತ್ನದಲ್ಲಿ ಪ್ರಶಸ್ತಿ ಒಲಿಸಿಕೊಳ್ಳುವ ಕನಸು ಕಾಣಬಹುದಾಗಿದೆ.
ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿಕಾಕ್, ದೇವದತ್ ಪಡಿಕ್ಕಲ್, ಆಯುಷ್ ಬಡೋನಿ, ಕೆ.ಗೌತಮ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಪ್ರೇರಕ್ ಮಂಕಡ್, ಕೈಲ್ ಮೇಯರ್ಸ್, ಅಮಿತ್ ಮಿಶ್ರಾ, ಮೊಹ್ಸಿನ್ ಖಾನ್, ನವೀನ್ ಉಲ್ ಹಕ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ರವಿ ಬಿಷ್ಣೋಯಿ, ಕರಣ್ ಶರ್ಮ, ಮಾರ್ಕಸ್ ಸ್ಟೋಯಿನಿಸ್, ಸ್ವಪ್ನಿಲ್ ಸಿಂಗ್, ಜೈದೇವ್ ಉನಾದ್ಕತ್, ಮನನ್ ವೊಹ್ರಾ, ಶಮರ್ ಜೋಸೆಫ್, ಮಯಾಂಕ್ ಯಾದವ್, ಯಶ್ ಠಾಕೂರ್, ಯಧ್ವೀರ್ ಸಿಂಗ್, ಮೊಹ್ಸಿನ್ ಖಾನ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆಶ್ಟನ್ ರ್ಟನರ್, ಡೇವಿಡ್ ವಿಲ್ಲಿ, ಅರ್ಷದ್ ಖಾನ್.
2ನೇ ಹಂತದ ವೇಳಾಪಟ್ಟಿಗೆ ಕಠಿಣ ಸವಾಲು; ಚುನಾವಣೆಯ ಜತೆಗೆ ಈದ್-ರಾಮನವಮಿ ಭದ್ರತಾ ತಾಪತ್ರಯ