More

    ಬಂಗಾಳ ಹಿಂಸಾಚಾರ: ಸಿಬಿಐ ತನಿಖೆ ಆದೇಶಿಸಿದ ಹೈಕೋರ್ಟ್​

    ಕೊಲ್ಕತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳ ನಂತರ ನಡೆದ ಹಿಂಸಾಚಾರಗಳ ಬಗ್ಗೆ ಸಿಬಿಐ ತನಿಖೆಗೆ ಕೊಲ್ಕತ ಹೈಕೋರ್ಟ್​ ಆದೇಶಿಸಿದೆ. ಕೊಲ್ಕತ ಪೊಲೀಸ್​ ಕಮಿಷನರ್​ ಸೌಮೇನ್ ಮಿತ್ರ ಅವರೂ ಸೇರಿದಂತೆ ಈ ತನಿಖೆಗಾಗಿ ಸಿಬಿಐ ವಿಶೇಷ ತಂಡವೊಂದನ್ನು ರಚಿಸಬೇಕೆಂದು ನ್ಯಾಯಾಲಯ ಹೇಳಿದೆ.

    ಆರೋಪಿತ ಹಿಂಸಾಚಾರದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕೆಂದು ಕೋರಿರುವ ಸರಣಿ ರಿಟ್​ ಅರ್ಜಿಗಳ ವಿಚಾರಣೆಯ ನಂತರ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂಡಾಲ್​ ಅವರ ನೇತೃತ್ವದ ಪಂಚಸದಸ್ಯ ನ್ಯಾಯಪೀಠವು ಇಂದು ಈ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಮಾತಿನ ಮೇಲೆ ಹಿಡಿತವಿಲ್ಲದ ಕಾಲಿವುಡ್​ ನಟಿ ಮೀರಾ ಮಿಥುನ್​ ಯೂಟ್ಯೂಬ್​ ಸಸ್ಪೆಂಡ್​..!

    ಚುನಾವಣೆಯಲ್ಲಿ ಟಿಎಂಸಿಯ ಭಾರೀ ಗೆಲುವಿನ ನಂತರ ಬಿಜೆಪಿಯ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದರು, ಕಾರ್ಯಕರ್ತರನ್ನು ಸಾಯಿಸಿದರು, ಬಿಜೆಪಿ ಸದಸ್ಯರ ಮನೆಗಳನ್ನು ಧ್ವಂಸ ಮಾಡಿ, ಅಂಗಡಿ-ಕಚೇರಿಗಳನ್ನು ಲೂಟಿ ಮಾಡಿದರು ಎಂದು ಬಿಜೆಪಿ ಆರೋಪಿಸಿತ್ತು. ಹೈಕೋರ್ಟ್​ ಆದೇಶದ ಪ್ರಕಾರ ಆರಂಭಿಕ ತನಿಖೆ ನಡೆಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರ ಹಿಂಸಾಚಾರದ ಘಟನೆಗಳ ಬಗ್ಗೆ ಭವ್ಯನಿರ್ಲಕ್ಷ್ಯ ತೋರಿದ್ದು, ಸಿಬಿಐ ತನಿಖೆ ನಡೆಸಿ ರಾಜ್ಯದ ಹೊರಗೆ ಪ್ರಕರಣಗಳ ವಿಚಾರಣೆ ನಡೆಸಬೇಕೆಂದು ಶಿಫಾರಸು ಮಾಡಿತ್ತು. (ಏಜೆನ್ಸೀಸ್)

    ದೂರು ಕೊಟ್ಟಳೆಂದು ಹೆಂಡತಿಯ ಮೇಲೆ ಗುಂಡು ಹಾರಿಸಿದ! ಆ ಸಮಯಕ್ಕೇ ಪೊಲೀಸರ ಎಂಟ್ರಿ!

    ತಾಲಿಬಾನನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಸಂಸದ! ದೇಶದ್ರೋಹದ ಪ್ರಕರಣ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts