ಚಿಕ್ಕಬಳ್ಳಾಪುರ: ಪ್ರೀತಿಸಿದ ಯುವತಿ ಜನ್ಮ ದಿನಕ್ಕೆ ಶುಭಾಶಯ ಹೇಳದ ಹಿನ್ನೆಲೆಯಲ್ಲಿ ನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿದ್ದ.
ಡೆತ್ ನೋಟ್ ಬರೆದಿರುವ ಶಿವಕುಮಾರ್ ನನ್ನ ಸಾವಿಗೆ ನಾನೇ ಕಾರಣ. ನಾನು ಪ್ರೀತಿಸಿದ ಯುವತಿ ನನ್ನ ಜನ್ಮ ದಿನದ ಶುಭಾಶಯ ಕೋರದ ಹಿನ್ನೆಲೆಯಲ್ಲಿ ನೋವಾಗಿದೆ. ನಾನು ಮೃತಪಟ್ಟಿರುವ ವಿಷಯವನ್ನು ಆಕೆಗೆ ತಿಳಿಸಬೇಡಿ ಎಂದು ಬರೆದಿದ್ದಾನೆ.
ಶಿವಕುಮಾರ್ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಗ್ರಾಮದ ನಿವಾಸಿ. ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಫೆ.26ರಂದು ಶಿವಕುಮಾರ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಹುಟ್ಟುಹಬ್ಬಕ್ಕೆ ಯುವತಿ ಶುಭಾಶಯ ಕೋರಲಿಲ್ಲ ಎಂದು ಮನನೊಂದು ಗುರುವಾರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ನಂದಿ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)