More

    ಪ್ರೇಯಸಿ ಜನ್ಮ ದಿನದ ಶುಭಾಶಯ ಹೇಳದ ಹಿನ್ನೆಲೆಯಲ್ಲಿ ನೇಣಿಗೆ ಶರಣಾದ ಕ್ಯಾಬ್​ ಚಾಲಕ

    ಚಿಕ್ಕಬಳ್ಳಾಪುರ: ಪ್ರೀತಿಸಿದ ಯುವತಿ ಜನ್ಮ ದಿನಕ್ಕೆ ಶುಭಾಶಯ ಹೇಳದ ಹಿನ್ನೆಲೆಯಲ್ಲಿ ನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಶಿವಕುಮಾರ್​ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಬೆಂಗಳೂರಿನಲ್ಲಿ ಕ್ಯಾಬ್​ ಚಾಲಕನಾಗಿದ್ದ.

    ಡೆತ್​ ನೋಟ್​ ಬರೆದಿರುವ ಶಿವಕುಮಾರ್​ ನನ್ನ ಸಾವಿಗೆ ನಾನೇ ಕಾರಣ. ನಾನು ಪ್ರೀತಿಸಿದ ಯುವತಿ ನನ್ನ ಜನ್ಮ ದಿನದ ಶುಭಾಶಯ ಕೋರದ ಹಿನ್ನೆಲೆಯಲ್ಲಿ ನೋವಾಗಿದೆ. ನಾನು ಮೃತಪಟ್ಟಿರುವ ವಿಷಯವನ್ನು ಆಕೆಗೆ ತಿಳಿಸಬೇಡಿ ಎಂದು ಬರೆದಿದ್ದಾನೆ.

    ಶಿವಕುಮಾರ್​ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಗ್ರಾಮದ ನಿವಾಸಿ. ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಫೆ.26ರಂದು ಶಿವಕುಮಾರ್​ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಹುಟ್ಟುಹಬ್ಬಕ್ಕೆ ಯುವತಿ ಶುಭಾಶಯ ಕೋರಲಿಲ್ಲ ಎಂದು ಮನನೊಂದು ಗುರುವಾರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
    ನಂದಿ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts