More

    ಬ್ಯಾಲಹಳ್ಳಿ ಗೋವಿಂದಗೌಡ ಅವಿರೋಧ ಆಯ್ಕೆ

    ಕೋಲಾರ: ರಾಜ್ಯದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಈ ಹಿಂದೆ ಮುಳಬಾಗಿಲು ತಾಲೂಕಿನ ನೀಲಕಂಠೇಗೌಡ ನಿರ್ದೇಶಕರಾಗಿದ್ದರು ಈ ಬಾರಿಯೂ ಅವರೇ ಪ್ರತಿನಿಧಿಸಲು ಇಚ್ಛಿಸಿದ್ದರಾದರೂ ಅಪೆಕ್ಸ್ ಬ್ಯಾಂಕಿನಲ್ಲಿ ಎರಡೂ ಜಿಲ್ಲೆಯನ್ನು ಪ್ರತಿನಿಧಿಸುವ ಸಮರ್ಥರೊಬ್ಬರು ಇರಬೇಕೆಂಬ ಉದ್ದೇಶದಿಂದ ಎರಡೂ ಜಿಲ್ಲೆಯ ಬಹುತೇಕ ಶಾಸಕರ ಸಲಹೆ ಮೇರೆಗೆ ಬ್ಯಾಲಹಳ್ಳಿ ಗೋವಿಂದಗೌಡರನ್ನು ನಿರ್ದೇಶಕರನ್ನಲಾಗಿ ಆರಿಸಲಾಗಿದೆ.

    ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕಿಗೆ ಮರು ಜೀವ ನೀಡಿ ದೇಶದಲ್ಲೇ ಮಾದರಿ ಬ್ಯಾಂಕ್ ಆಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾಗಿರುವ ಗೋವಿಂದಗೌಡ ಅವರನ್ನು ಅಪೆಕ್ಸ್ ಬ್ಯಾಂಕಿಗೆ ಆಯ್ಕೆ ಮಾಡಿದಲ್ಲಿ ಬ್ಯಾಂಕಿಗೆ ಇನ್ನಷ್ಟು ಲಾಭವಾಗುತ್ತದೆ, ಜತೆಗೆ ಸವಲತ್ತುಗಳಿಗಾಗಿ ಹೋರಾಡುವ ಗಟ್ಟಿತನ ಇರುವುದರಿಂದ ಶಾಸಕರು ಇವರನ್ನು ಆಯ್ಕೆ ಮಾಡಲು ಸಲಹೆ ನೀಡಿದ ಮೇರೆಗೆ ಬ್ಯಾಂಕ್ ನಿರ್ದೇಶಕರು ಒಮ್ಮತದಿಂದ ಆಯ್ಕೆ ಮಾಡಿದ್ದರು.

    ಡಿಸಿಎಂ ಲಕ್ಷ್ಮಣ ಸವದಿ, ಕಾರ್ಮಿಕ ಸಚಿವ ಶಿವರಾಮ ಮಹಾಬಲೇಶ್ವರ ಹೆಬ್ಬಾರ, ತುಮಕೂರಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸೇರಿ ವಿವಿಧ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಆಯ್ಕೆಯಾಗಿದ್ದು ಈ ಘಟಾನುಘಟಿಗಳ ಜತೆ ಕೆಲಸ ಮಾಡುವ ಅವಕಾಶ ಗೋವಿಂದಗೌಡರಿಗೆ ಸಿಕ್ಕಿದೆ. ಆಯ್ಕೆಗೆ ಸಹಕಾರ ನೀಡಿದ ಅವಿಭಜಿತ ಜಿಲ್ಲೆಯ ಎಲ್ಲ ಶಾಸಕರು, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಹಾಗೂ ಸಹಕಾರಿಗಳಿಗೆ ಗೋವಿಂದಗೌಡ ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts