ವಿಜಯವಾಣಿ ಸುದ್ದಿಜಾಲ ಗದಗ
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಡಿ.24 ರಂದು ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆಯಲಿರುವ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿ.24 ರಂದು ಸಂಜೆ 4ಕ್ಕೆ ಪಕ್ಷದ ಕಚೇರಿಗೆ ಆಗಮಿಸುವರು. ತದನಂತರ ಬೈಕ್ ರ್ಯಾಲಿ ಮೂಲಕ ಸಮಾವೇಶಕ್ಕೆ ಅವರನ್ನು ಕರೆತರಲಾಗುವುದು ಎಂದರು. ಮುಂಬರುವ ಜಿಪಂ, ತಾಪಂ ಹಾಗೂ ಲೋಕ ಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಲು ಕಾರ್ಯಕ್ರಮ ಜರುಗಲಿದೆ ಎಂದರು.
ಚೈಲ್ಡೀಶ್ ರಾಹುಲ್ ಗಾಂಧಿ: ಸಿ.ಸಿ. ಪಾಟೀಲ ಆರೋಪ.
ಕಾಂಗ್ರೆಸ್ ಸಂಸದ ಕಲ್ಯಾಣಬ್ಯಾನಜಿರ್ ಅವರು ಉಪರಾಷ್ಟ್ರಪತಿಗಳ ಅಣುಕು ಪ್ರದರ್ಶನ ಮಾಡಿದ್ದನ್ನು ರಾಹುಲ್ ಗಾಂಧಿ ಚಿತ್ರೀಕರಿಸುತ್ತಾರೆ. ಇದರಿಂದ ರಾಹುಲ್ ಗಾಂಧಿ ಮಕ್ಕಳ ಮನಸ್ಥಿತಿ ಹೊಂದಿದ್ದಾರೆ ಎಂದು ಸಾಭಿತಾಗುತ್ತಿದೆ. ದೇಶದ ಪರಮೋಚ್ಚ ಸಂವಿಧಾನಿಕ ಹುದ್ದೆಯಲ್ಲಿರುವ ಉಪರಾಷ್ಟ್ರಪತಿಗಳ ಕುರಿತು ಹೇಗೆ ನಡೆದುಕೊಳ್ಳಬೇಕು ಎಂಬುದುನ್ನು ಸಹ ರಾಹುಲ್ ಗಾಂಧಿ ಅವರಿಗೆ ಅರ್ತವಾಗುವುದಿಲ್ಲ ಎಂಬುದು ಖೇದಕರ ವಿಷಯ. ಅವರಿನ್ನೂ ಚೈಲ್ಡೀಶ್ ಮನೋಭಾವ ಹೊಂದಿದ್ದಾರೆ ಎಂದು ಆರೋಪಿಸಿದ ಸಿ.ಸಿ. ಪಾಟೀಲ, ಮಲ್ಲಿಕಾರ್ಜುನ ರ್ಖಗೆ ಅವರನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಿದ ಬೆನ್ನಲ್ಲೆ ನೆಹರು ಕುಟುಂಬದ ರಾಜಕೀಯದ ಅಂತ್ಯವನ್ನು ಕಾಂಗ್ರೆಸ್ ಮಿತ್ರಪಕ್ಷಗಳೇ ಸಾರಿವೆ ಎಂದರು.
ಇಬ್ಬರು ಶಾಸಕರು:
ಕಾಂಗ್ರೆಸ್ ಪರಾಭವ ಗೊಂಡ ಕ್ಷೇತ್ರದಲ್ಲಿ ಇಬ್ಬರು ಶಾಸಕರಿದ್ದಾರೆ. ಚುನಾವಣೆಯಲ್ಲಿ ಗೆದ್ದ ಒಬ್ಬರಾದರೆ, ಪರಾಭವಗೊಂಡ ಕಾಂಗ್ರೆಸ್ ಅಭ್ಯಥಿರ್ ಕೂಡ ಶಾಸಕರಂತೆ ವತಿರ್ಸುತ್ತಿದ್ದಾರೆ. ಕ್ಷೇತ್ರದ ಎಲ್ಲ ಅಧಿಕಾರಿಗಳು ಪರಾಭವಗೊಂಡ ಕಾಂಗ್ರೆಸ್ ಅಭ್ಯಥಿರ್ ಮನೆ ಮುಂದೆ ಹೋಗಿ ನಿಲ್ಲಬೇಕಾದ ಸ್ಥಿತಿ ಉದ್ಭವಿಸಿದೆಎಂದು ಆರೋಪಿಸಿದರು.
ಮೊದಲಿನ ಸಿದ್ದರಾಮಯ್ಯರಾಗಿ ಉಳಿದಿಲ್ಲ:
ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಪಮಾನ ಮಾಡಿದ ವಂಟಮುರಿ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ನಡೆಸಲು ಕಾಂಗ್ರೆಸ್ ವಿಲವಾಗಿದ್ದು, ಇದು ತಲೆ ತಗ್ಗಿಸುವ ವಿಷಯ. ಆಡಳಿ ಮತ್ತು ಇತರೆ ಎಲ್ಲ ದೃಷ್ಟಿಕೋನದಿಂದಲೂ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದು, ಈ ಮೊದಲಿನ ಸಿದ್ದರಾಮಯ್ಯ ಆಗಿ ಉಳಿದಿಲ್ಲ ಎಂದು ಸಿ.ಸಿ. ಪಾಟೀಲ ಹೇಳಿದರು.