ಬೆಂಗಳೂರು: ನಗರದ ಅಂತರ್ಜಲಮಟ್ಟದ ಮೇಲೆ ನಿರಂತರಾಗಿ ನಿಗಾ ಇಡಲು ಐಐಎಸ್ಸಿ ವಿಜ್ಞಾನಿನಿಗಳು, ಸಿಜಿಡಬ್ಲ್ಯೂಬಿ ಜತೆಗೂಡಿ ಎಐ ಆಧಾರಿತ ‘ಗ್ರೌಂಡ್ ವಾಟರ್ ಮಾನಿಟರಿಂಗ್ ಸಿಸ್ಟಮ್’ ಅಳವಡಿಸಿಕೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಐಐಎಸ್ಸಿ ವಿಜ್ಞಾನಿಗಳು ಮತ್ತು ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ನ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಕುಸಿತವೇ ಪ್ರಮುಖ ಕಾರಣ. ಅಂತರ್ಜಲಮಟ್ಟ ಯಾವ ಹಂತದಲ್ಲಿದೆ? ಯಾವ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಹೆಚ್ಚಿದೆ ಎಂಬುದರ ಸರಿಯಾದ ಮಾಹಿತಿ ಲಭ್ಯವಾಗದೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಂತ್ರಾನ ಆಧಾರಿತ ವ್ಯವಸ್ಥೆಯನ್ನು ಅಳವಡಿಸಬೇಕಿದೆ. ಹೀಗಾಗಿ ಐಐಎಸ್ಸಿ ವಿಾನಿಗಳು, ಸಿಡಬ್ಲುಜಿಬಿ ಮತ್ತು ಅಂತರ್ಜಲ ಪ್ರಾಧಿಕಾರದ ಜತೆಗೂಡಿ ಎಐ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಜಲಮಂಡಳಿ ಮುಂದಾಗಿದೆ ಎಂದರು.
ಕಾರ್ಯಪಡೆ ರಚನೆ:
ಐಐಎಸ್ಸಿ ವಿಜ್ಞಾನಿಗಳು, ಸಿಡಬ್ಲುಜಿಬಿ ಹಾಗೂ ಅಂತರ್ಜಲ ಪ್ರಾಧಿಕಾರದ ಸಹಯೋಗದೊಂದಿಗೆ ಜಲಮಂಡಳಿಯಲ್ಲಿ ಅಂತರ್ಜಲ ಕಾರ್ಯಪಡೆ (ಗ್ರೌಂಡ್ ವಾಟರ್ ಟಾಸ್ಕ್ಫೋರ್ಸ್) ರಚಿಸಲಾಗುವುದು. ಈ ಮೂಲಕ ನಗರದ ಅಂತರ್ಜಲಮಟ್ಟದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ನಿರಂತರವಾಗಿ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಈ ಕಾರ್ಯಪಡೆ ಸಹಾಯ ಮಾಡಲಿದೆ ಎಂದರು.