ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 10 ಹೊಸ ಶಾಸಕರು ಸೇರ್ಪಡೆಯಾಗಿದ್ದು, ಮಂತ್ರಿಮಂಡಲದ ಗಾತ್ರ 18 ರಿಂದ 28ಕ್ಕೆ ಹಿಗ್ಗಿದೆ. ಆದರೆ, ಖಾಲಿ ಉಳಿದಿರುವ ಆರು ಸ್ಥಾನಗಳ ಮೇಲೆ ಹಲವರು ಕಣ್ಣಿಟ್ಟಿದ್ದು, ಸಂಕಟ ಇನ್ನೂ ಹಾಗೆಯೇ ಉಳಿದಿದೆೆ.
ಸಿಎಂಗಿರುವ ಮುಂದಿನ ಸವಾಲುಗಳೇನು?
# ಖಾತೆ ಹಂಚಿಕೆಯಲ್ಲಿ ಯಾರಿಗೂ ನೋವಾಗದಂತೆ ಗಮನವಹಿಸುವುದು
# ಮೂಲ ಬಿಜೆಪಿಗರು ಬಂಡಾಯ ಏಳದಂತೆ ನೋಡಿಕೊಳ್ಳುವುದು
# ಹೈಕಮಾಂಡ್ ಇಟ್ಟಿರುವ ವಿಶ್ವಾಸಕ್ಕೆ ತಮ್ಮ ಆಪ್ತರು ಧಕ್ಕೆ ತರದಂತೆ ಮೈ ಎಲ್ಲ ಕಣ್ಣಾಗಿರುವುದು
# ಜೂನ್-ಜುಲೈನಲ್ಲಿ ಸಂಪುಟ ಪುನಾರಚನೆ ವೇಳೆ ಸೋತವರಿಗೆ ಅವಕಾಶ ನೀಡುವುದು
# ಖಾಲಿ ಇರುವ ಆರು ಸ್ಥಾನಗಳನ್ನು ತುಂಬುವಲ್ಲಿ ಜಾಗರೂಕವಾಗಿ ವರ್ತಿಸುವುದು
# ಪುನಾರಚನೆ ಆದಾಗ ಭಿನ್ನಮತಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವುದು
# ಮುಂದೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಗುವಂತೆ ಮಾಡುವುದು
# ನೂತನ ಸಚಿವರ ಖಾತೆ ನಿರ್ವಹಣೆಯಲ್ಲಿ ಒಳ್ಳೆಯ ಹೆಸರು ಪಡೆಯುವಂತೆ ಮಾಡುವುದು
# ಆಡಳಿತ ಯಂತ್ರಕ್ಕೆ ಚುರುಕು ಮೂಡಿಸುವುದು
# ಸಚಿವರ ಬಳಿ ಇದ್ದ ಹೆಚ್ಚುವರಿ ಖಾತೆಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸುವುದು