ನವದೆಹಲಿ: ಇತ್ತೀಚೆಗೆ ವೈದ್ಯರಿಂದ ಹಿಡಿದು ವಾರ್ಡ್ಬಾಯ್, ಆಸ್ಪತ್ರೆಯ ಸ್ವಚ್ಛತಾಗಾರರವರೆಗೆ ಎಲ್ಲರಲ್ಲೂ ಮಾನವೀಯತೆಯೇ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ಕೊಡದೆ ಏನೊಂದು ಕೆಲಸ ಆಗುವುದಿಲ್ಲ ಎಂಬಂತೆ ತೋರುತ್ತಿದೆ. ಕೇವಲ 30 ರೂ. ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ವಾರ್ಡ್ಬಾಯ್ ಒಬ್ಬ ಸ್ಟ್ರೆಚರ್ ದೂಡಲು ನಿರಾಕರಿಸಿದ್ದಾನೆ. ಇದರಿಂದಾಗಿ ಆ ಬಡ ಕುಟುಂಬದ 6 ವರ್ಷದ ಮಗು ಸ್ಟ್ರೆಚರ್ ಅನ್ನು ದೂಡಿಕೊಂಡು ಹೋಗಿದೆ.
ಉತ್ತರ ಪ್ರದೇಶದ ದೇವೊರಿಯಾ ಎಂಬಲ್ಲಿ ವ್ಯಕ್ತಿಯೊಬ್ಬ ತೀವ್ರ ಅಸ್ವಸ್ಥನಾಗಿದ್ದ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ ವೈದ್ಯರು ನಿರ್ದಿಷ್ಟವಾದ ವಾರ್ಡ್ಗೆ ಕರೆದೊಯ್ಯುವಂತೆ ಸೂಚಿಸಿದ್ದರು.
ಇದನ್ನೂ ಓದಿ: ಈ ವರ್ಷ ಎರಡು ಬಿಡುಗಡೆ; ಮೂರು ಶೂಟಿಂಗ್ … ಇನ್ನು ಸುಮ್ಮನೆ ಕೂರಲ್ಲ ಅಕ್ಷಯ್
ಆ ನಡೆಯಲಾಗದಷ್ಟು ನಿಶ್ಶಕ್ತನಾಗಿದ್ದ. ಆದ್ದರಿಂದ ಸ್ಟ್ರೆಚರ್ ಮೇಲೆ ಮಲಗಿಸಿ ಆತನನ್ನು ವಾರ್ಡ್ಗೆ ಕರೆದೊಯ್ಯುವುದು ಅನಿವಾರ್ಯವಾಗಿತ್ತು. ಅದರಂತೆ ಸ್ಥಳದಲ್ಲಿದ್ದ ವಾರ್ಡ್ಬಾಯ್ಗೆ ಆ ವ್ಯಕ್ತಿಯನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ಕರೆದೊಯ್ಯುವಂತೆ ಬಡ ಕುಟುಂಬ ಮನವಿ ಮಾಡಿಕೊಂಡಿತ್ತು.
ಆದರೆ ಆತ 30 ರೂ. ಕೊಟ್ಟರೆ ವಾರ್ಡ್ವರೆಗೆ ಸ್ಟ್ರೆಚರ್ ದೂಡುವುದಾಗಿ ಹೇಳಿದ. ಆತನಿಗೆ ಕೊಡಲು ಹಣ ಇಲ್ಲದ ಕಾರಣ ತಾಯಿ ಸ್ಟ್ರೆಚರ್ನ ಮುಂಭಾಗದಲ್ಲಿ ಹಾಗೂ 6 ವರ್ಷದ ಬಾಲಕ ಹಿಂಭಾಗದಲ್ಲಿ ಸ್ಟ್ರೆಚರ್ ಅನ್ನು ದೂಡಿಕೊಂಡು ಹೋಗಿ ಆ ವ್ಯಕ್ತಿಯನ್ನು ವಾರ್ಡ್ಗೆ ಸ್ಥಳಾಂತರಿಸಿದರು.
ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಕೊವಿಡ್-19ನಿಂದ ತತ್ತರಿಸಿರುವ ಅಮೆರಿಕಕ್ಕೆ ಆಘಾತ; ಶುರುವಾಗಿದೆ ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗ