More

    ನಗರದ ಎಲ್ಲ ಹೋಟೆಲ್ಗಳನ್ನು ಕಾಯ್ದಿರಿಸಿ

    • ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರು ದಿನ ನುಡಿ ಜಾತ್ರೆಗೆ ಬರುವ ಗಣ್ಯರು, ಪರಿಷತ್ತಿನ ಪದಾಧಿಕಾರಿಗಳು ಹಾಗೂ ನೋಂದಾಯಿತ ಪ್ರತಿನಿಧಿಗಳಿಗೆ ತಂಗಲು ಅನುಕೂಲವಾಗುವಂತೆ ಈಗಾಗಲೇ ಕಾಯ್ದಿರಿಸಿದ ಹೋಟೆಲ್ಗಳು ಸಾಲದು. ನಗರದ ಬಹುತೇಕ ಹೋಟೆಲ್ಗಳನ್ನು ಕಾಯ್ದಿರಿಸಬೇಕು ಎಂದು ಸಾಹಿತ್ಯ ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
      ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಸತಿ ಸಮಿತಿಗೆ ಸಂಬಂಧಿಸಿದಂತೆ ಎಲ್ಲ ಪೂರ್ವಸಿದ್ಧತೆಗಳು ವಾರದೊಳಗೆ ಪೂರ್ಣಗೊಳಿಸಬೇಕು. ಸಮ್ಮೇಳನಕ್ಕೆ ಆಗಮಿಸುವ ಒಟ್ಟಾರೆ ಜನಸಂಖ್ಯೆ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಿ ನೀಡಿದಲ್ಲಿ ಅದಕ್ಕನುಗುಣವಾಗಿ ಎ, ಬಿ, ಸಿ, ಕೆಟಗರಿಯನ್ವಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕುರಿತು ಸಮಿತಿಗೆ ತಕ್ಷಣ ಪಟ್ಟಿ ಸಲ್ಲಿಸುವಂತೆ ಜಿಲ್ಲಾ ಕಸಾಪ ಆಧ್ಯಕ್ಷ ವೀರಭದ್ರ ಸಿಂಪಿಗೆ ಖಗರ್ೆ ತಿಳಿಸಿದರು.
      ಹೆಲ್ಪ್ ಡೆಸ್ಕ್ ಸ್ಥಾಪಿಸಿ: ಕನ್ನಡದ ಮೇರು ಹಬ್ಬಕ್ಕೆ ಬೇರೆ ಊರುಗಳಿಂದ ಬರುವವರಿಗೆ ನಗರದ ಬಸ್, ರೈಲು ಮತ್ತು ವಿಮಾನ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ವಸತಿ, ಸಾರಿಗೆ ಸೇರಿ ಕಾರ್ಯಕ್ರಮಗಳ ಮಾಹಿತಿ ನೀಡಲು ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
      ಬಸ್ಸಿನ ಖರ್ಚು ಭರಿಸಲು ದೇಣಿಗೆ: ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಮ್ಮೇಳನಕ್ಕೆ ಸಾರ್ವಜನಿಕರನ್ನು ಕರೆದುಕೊಂಡು ಬಂದು ಮರಳಿ ಹೋಗುವ ಸಕರ್ಾರಿ ಬಸ್ಗಳ ವೆಚ್ಚ ಸುಮಾರು 8 ಲಕ್ಷ ರೂ. ಆಗಲಿದ್ದು, ಈಶಾನ್ಯ ಕನರ್ಾಟಕ ಸಾರಿಗೆ ಸಂಸ್ಥೆಯಿಂದ ಈ ವೆಚ್ಚ ಭರಿಸಲು ಅವಕಾಶವಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ತಿಳಿಸಿದಾಗ, ಆ ಹಣವನ್ನು ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಜಿಪಂ ಸದಸ್ಯರಿಂದ ಸಂಗ್ರಹಿಸಿ ನೀಡುವುದಾಗಿ ಪ್ರಿಯಾಂಕ್ ತಿಳಿಸಿದರು.
      ಆರ್.ಟಿ.ಓ. ದಾಮೋದರ ಮಾತನಾಡಿ, ಪ್ರತಿನಿಧಿಗಳು ಸೇರಿ ಇತರರ ಓಡಾಟಕ್ಕೆ ಒಟ್ಟಾರೆ 200 ಶಾಲಾ ಬಸ್ಗಳನ್ನು ತೆಗೆದುಕೊಳ್ಳಲಾಗುವುದು. ಜತೆಗೆ ಬಾಡಿಗೆ ಆಧಾರದ ಮೇಲೆ ತಲಾ 50 ಇನ್ನೋವಾ, ಕ್ರೂಸರ್, ಕಾರುಗಳನ್ನೂ ಪಡೆಯಲಾಗುತ್ತಿದೆ. ಇನ್ನೂ ಅವಶ್ಯಕತೆ ಇದ್ದಲ್ಲಿ ತಾಲೂಕುಗಳಿಂದ ವಾಹನಗಳನ್ನು ಪಡೆಯಲಾಗುವುದು ಎಂದು ತಿಳಿಸಿದರು.
      ಸಾಹಿತ್ಯ ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿ ಕಾರ್ಯಧ್ಯಕ್ಷ ಜಿಪಂ ಸಿಇಒ ಡಾ. ಪಿ. ರಾಜಾ ಮಾತನಾಡಿ, ವಸತಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ 18 ಕಲ್ಯಾಣ ಮಂಟಪ, 16 ಶಿಕ್ಷಣ ಸಂಸ್ಥೆಗಳು, 36 ಹೋಟೆಲ್- ಲಾಡ್ಜ್ಗಳನ್ನು ಗುರುತಿಸಿ ಕೋಣೆ ಕಾಯ್ದಿರಿಸಲಾಗಿದೆ. ಹೋಟೆಲ್ ಮತ್ತು ಕೋಣೆಗಳು ಇನ್ನೂ ಹೆಚ್ಚಿಗೆ ಬೇಕಿದ್ದು, ಶೀಘ್ರದಲ್ಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೋಟೆಲ್ ಮಾಲೀಕರ ಸಭೆ ಕರೆದು ಕಾಯ್ದಿರಿಸಲಾಗುವುದು. ವಸತಿಗೆ ಗುರುತಿಸಿರುವ ಶಿಕ್ಷಣ ಸಂಸ್ಥೆ ಮತ್ತು ಕಲ್ಯಾಣ ಮಂಟಪದಲ್ಲಿನ ಶೌಚಗೃಹ, ಸ್ನಾನಗೃಹ, ವಿದ್ಯುತ್ ದುರಸ್ತಿ ಮಾಡಲು ಹಾಗೂ ತಾತ್ಕಾಲಿಕವಾಗಿ 500 ಸ್ನಾನಗೃಹ, 400 ಶೌಚಗೃಹಗಳನ್ನು ನಿಮರ್ಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ವಸತಿ ವ್ಯವಸ್ಥೆ ಕುರಿತಂತೆ ಸಹಾಯಕ್ಕಾಗಿ 100 ಪ್ರತಿನಿಧಿಗಳಿಗೆ ಓರ್ವ ಪಿ.ಡಿ.ಓ. ಮತ್ತು 1000 ಜನ ಪ್ರತಿನಿಧಿಗಳ ಮೇಲ್ವಿಚಾರಣೆಗೆ ಓರ್ವ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.
      ಜಿಪಂ ವಿಪಕ್ಷ ನಾಯಕ ಶಿವಾನಂದ ಪಾಟೀಲ್, ಸದಸ್ಯ ಶರಣಗೌಡ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಐ.ಎ.ಎಸ್. ಪ್ರೊಬೇಷನರ್ ಅಧಿಕಾರಿ ಗೋಪಾಲಕೃಷ್ಣ ಬಿ., ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಡಿಡಿಪಿಐ ಶರಣಗೌಡ ಪಾಟೀಲ್, ಜಿಲ್ಲಾ ಕಾಮರ್ಿಕ ಅಧಿಕಾರಿ ಶ್ರೀಹರಿ, ಹೋಟೆಲ್ ಮಾಲೀಕರ ಸಂಘದ ಕಾರ್ಯದಶರ್ಿ ನರಸಿಂಹ ಮೆಂಡನ್ ಇತರರು ಇದ್ದರು.

    ನುಡಿ ಸಮ್ಮೇಳನ ರಾಷ್ಟ್ರೀಯ ಹಬ್ಬವಾಗಿರುವುದರಿಂದ ನಗರದ ಎಲ್ಲ ಹೋಟೆಲ್, ಲಾಡ್ಜ್ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಅಟೋ, ಟ್ಯಾಕ್ಸಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನುಡಿ ಸಮ್ಮೇಳನಕ್ಕೆ ಬರುವವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡುವಂತೆ ಕೋರಬೇಕು.
    ಪ್ರಿಯಾಂಕ ಖರ್ಗೆ , ಅಧ್ಯಕ್ಷ,
    ಸಾರಿಗೆ, ವಸತಿ ಸಮಿತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts