ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸವನ್ನು ನವೀಕರಿಸಲು 45 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಾತನಾಡಿ, ಎಎಪಿ ನೇತೃತ್ವದ ಕೇಜ್ರಿವಾಲ್ ಅವರು ರಾಜಕೀಯಕ್ಕೆ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಉತ್ತೇಜಿಸುವ ಭರವಸೆಯನ್ನು ದ್ರೋಹ ಮಾಡಿದ್ದಾರೆ. ಅವರು ಅವರನ್ನು ‘ಮಹಾರಾಜ’ ಅಥವಾ ರಾಜ ಅಂದುಕೊಂಡಿದ್ದಾರೆ. ಅವರು ‘ಐಷಾರಾಮಿ ಮತ್ತು ಸೌಕರ್ಯವನ್ನು ಬಯಸುತ್ತಾರೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಲಾಭ ತಗೊಂಡು ಮೋಸ ಮಾಡಿದವರಿಗೆ ಜನತೆ ಬುದ್ಧಿ ಕಲಿಸುತ್ತಾರೆ: ಬಸನ್ಗೌಡ ಪಾಟೀಲ್ ಯತ್ನಾಳ್
ಕೇಜ್ರಿವಾಲ್ ಅವರ ನಿವಾಸಕ್ಕೆ ವಿಯೆಟ್ನಾಂನಿಂದ ದುಬಾರಿ ಅಮೃತಶಿಲೆ, ಪೂರ್ವ-ನಿರ್ಮಿತ ಮರದ ಗೋಡೆಗಳು ಮತ್ತು ತಲಾ ಲಕ್ಷ ರೂಪಾಯಿ ವೆಚ್ಚದ ಪರದೆಗಳನ್ನು ಅಳವಡಿಸಲಾಗಿದೆ ಎಂದು ತೋರಿಸುವ ದಾಖಲೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಒಂದು ಪರದೆಗೆ ಬರೋಬ್ಬರಿ 7.94 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ.ಈ ಸುದ್ದಿಯನ್ನು ಹತ್ತಿಕ್ಕಲು ಕೇಜ್ರಿವಾಲ್ ಮಾಧ್ಯಮ ಸಂಸ್ಥೆಗಳಿಗೆ 20 ರಿಂದ 50 ಕೋಟಿ ನೀಡಿದ್ದರು. ಆದರೆ, ಅವರು ಅವರ ಪ್ರಸ್ತಾಪವನ್ನು ನಿರ್ಲಕ್ಷಿಸಿದ್ದಾರೆ ಎಂದು ಪಾತ್ರಾ ಆರೋಪಿಸಿದ್ದಾರೆ.
मित्र डॉनल्ड ट्रम्प की 3 घंटे की विज़िट के लिए 80 करोड़ खर्च दिया। गुजरात और मध्यप्रदेश के मुख्यमंत्री अपने लिए 200 करोड़ के हवाई जहाज़ ले लेते हैं। मजाल है कोई चैनल इस पर डिबेट कर ले।
अरविंद केजरीवाल जी को 1942 में बना 1 एकड़ से भी छोटा बँगला एलोट किया जिसकी छत्ते 3 बार गिर… pic.twitter.com/GJZkSp60rD
— Priyanka Kakkar (@PKakkar_) April 25, 2023
ಕೇಜ್ರಿವಾಲ್ ಅವರು ತಮ್ಮ ಹಿಂದಿನ ಭಾಷಣಗಳಲ್ಲಿ ಅದ್ದೂರಿ ಖರ್ಚುಗಳನ್ನು ವಿರೋಧಿಸುವಂತೆ ಮಾತನಾಡಿದ್ದಾರೆ. ರಾಜಕಾರಣಿಗಳು ಆಡಂಬರದ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಾರ್ವಜನಿಕ ವೆಚ್ಚದಲ್ಲಿ ಇತರ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ ಎಂದು ಟೀಕಿಸಿದರು. ನಾಲ್ಕೈದು ಕೋಣೆಗಳ ಮನೆಯಿಂದ ತೃಪ್ತನಾಗಿದ್ದೇನೆ ಮತ್ತು ದೊಡ್ಡದೊಂದು ಬೇಕಾಗಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಕೇಜ್ರಿವಾಲ್ ಅವರು ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನಗಳನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ದಂತೆಯೇ ಅವರ ನಿವಾಸ ನವೀಕರಣದ ಕುರಿತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಬಿಜೆಪಿ ವಕ್ತಾರ, ಕೇಜ್ರಿವಾಲ್ ಅವರಿಗೆ ಸವಾಲು ಹಾಕಿದ್ದಾರೆ.
224 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕೋಟಿ ಮಂದಿ ಮತದಾರಿದ್ದಾರೆ: ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ