More

    ಕಾಯ್ದೆಗಳ ತಿದ್ದುಪಡಿಯಿಂದ ರೈತರ ಆದಾಯ ದ್ವಿಗುಣ ಎಂದ ಬಿಜೆಪಿ ರೈತ ಮೋರ್ಚಾ ಮುಖಂಡರು

    ಬಳ್ಳಾರಿ: ರೈತರ ಆದಾಯ ದ್ವಿಗುಣ ಉದ್ದೇಶದೊಂದಿಗೆ ವಿವಿಧ ಕಾಯ್ದೆಗಳ ತಿದ್ದುಪಡಿ ಮಾಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಗಣಪಾಲ ಐನಾಥರೆಡ್ಡಿ ಹಾಗೂ ರಾಜ್ಯ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ ಹೇಳಿದರು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೇವು ಮಿಶ್ರಿತ ಯೂರಿಯಾ ಗೊಬ್ಬರ ಮಾರುಕಟ್ಟೆಗೆ ಬಿಡುಗಡೆ ಮೂಲಕ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ತಡೆಯಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೇರಳದಲ್ಲಿ ಎಪಿಎಂಸಿ ಕಾಯ್ದೆಯಿಲ್ಲ. ದೆಹಲಿ ಪ್ರತಿಭಟನೆ ಹಿಂದೆ ಖಾಲಿಸ್ಥಾನ ಹೋರಾಟಗಾರರು ಇದ್ದಾರೆ ಎಂದು ಐನಾಥರೆಡ್ಡಿ ಹಾಗೂ ಗುರುಲಿಂಗನಗೌಡ ಆರೋಪಿಸಿದರು. ಜಿಲ್ಲಾ ಉಪಾಧ್ಯಕ್ಷ ಶಿವರುದ್ರಗೌಡ ಹಾಜರಿದ್ದರು. 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts