More

    ವಿದ್ಯುದ್ದೀಪಗಳಿಂದ ಜಗಮಗಿಸುತ್ತಿರುವ ಬಿಜೆಪಿ ಕೇಂದ್ರ ಕಚೇರಿ

    ಬೆಂಗಳೂರು:
    ಬಿಜೆಪಿ ಕೇಂದ್ರ ಕಚೇರಿ ಆಲಂಕಾರಿಕ ವಿದ್ಯುತ್ ದೀಪಗಳಿಂದ ಶೃಗಾಂರಗೊಂಡು ಜಗಮಗಿಸುತ್ತಿದೆ.
    ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಹಬ್ಬದ ಸಡಗರ ಮನೆ ಮಾಡಿದೆ.
    ಓಂ ಮುದ್ರೆ ಇರುವ ಕೇಸರಿ ದ್ವಜಗಳನ್ನು ಭವನಕ್ಕೆ ಅಳವಡಿಸಲಾಗಿದೆ. ಇಡೀ ಆವರಣ ಕೇಸರಿಮಯವಾಗಿದ್ದು ರಾಮನ ಭಜನೆ ನಡೆಸಿದೆ.
    ಕಳೆದ ಒಂದು ವಾರದಿಂದಲೂ ಬಿಜೆಪಿ ಕೇಂದ್ರ ಕಚೇರಿ ನಾನಾ ಕಾರಣಕ್ಕೆ ಚಟುವಟಿಕೆಯ ತಾಣವಾಗಿದೆ. ರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಏನೇನು ಮಾಡಬೇಕು ಎನ್ನುವ ಮಾಹಿತಿ ಮತ್ತು ಸೂಚನೆಗಳನ್ನು ಇದೇ ಭವನದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಆ ಎಲ್ಲಾ ಸಭೆಗಳಿಗೆ ಆಗಮಿಸಿದ್ದ ಪದಾಧಿಕಾರಿಗಳಿಗೆ ಮತ್ತು ನಾನಾ ಘಟಕದ ಅಧ್ಯಕ್ಷರು ಮತ್ತು ಸಂಚಾಲಕರುಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
    ಇಡೀ ನಾಡಿನಲ್ಲಿ ರಾಮೋತ್ಸವವನ್ನು ಸಂಭ್ರಮ ಸಡಗರಗಳಿಂದ ಮಾಡಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತಿ ಮನೆಗೂ ರಾಮನಾಮ ತಲುಪಬೇಕು ಎನ್ನುವ ಸದುದ್ದೇಶದಿಂದ ಸ್ವಯಂಸೇವಕರ ತಂಡ ಹಗಲಿರಳು ಸೇವೆಯಲ್ಲಿ ತೊಡಗಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts