More

    ಸಮಸ್ಯೆ ಹೇಳಿಕೊಂಡ ಮತದಾರನಿಗೆ ಎರಡೇಟು ಹಾಕಿ‌ ಎಂದು ಗದರಿದ ಶಾಸಕ!

    ಕೊಪ್ಪಳ: ಸಮಸ್ಯೆ ಹೇಳಿಕೊಂಡ ಮತದಾರನಿಗೆ ಎರಡೇಟು ಹಾಕಿ ಎಂದು ಶಾಸಕರೊಬ್ಬರು ಹೇಳಿದ ಪ್ರಸಂಗವೊಂದು ನಡೆದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿಯ ಶಾಸಕರೇ ಮತದಾರರೊಬ್ಬರಿಗೆ ಗದರಿದ್ದಾರೆ.

    ಹೀಗೆ ಜನಸಾಮಾನ್ಯನನ್ನು ಗದರಿದ ಶಾಸಕರ ಹೆಸರು ಬಸವರಾಜ ದಢೇಸುಗೂರು. ಇವರು ಇಂದು ಕನಕಗಿರಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ಬಂದಾಗ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ.

    ಈ ಸಂದರ್ಭದಲ್ಲಿ ಮತದಾರರೊಬ್ಬರು ಆಸ್ಪತ್ರೆ ಸಮಸ್ಯೆಗಳನ್ನು ಸರಿಪಡಿಸಲು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಕೆರಳಿದ ಶಾಸಕ, ಮೊದಲು ಮನವಿ ಕೊಡು. ಅದು ಬಿಟ್ಟು ಸುಮ್ಮನೆ ಸಮಸ್ಯೆ ಹೇಳಬೇಡ. ಇಷ್ಟು ದಿನ ಏನು ಮಾಡಿದೆ? ಬೇಕೆಂದೇ ಪ್ರಚಾರಕ್ಕೆ ಅಡ್ಡಿಪಡಿಸುತ್ತಿಯಾ? ಇಂಥ ನಾಟಕಗಳನ್ನು ಮಾಡಬೇಡ ಎಂದು ಗದರಿದರು. ಅಲ್ಲದೇ ಅವನಿಗೆ ಎರಡೇಟು ಹಾಕಿದ್ರೆ ಸರಿಯಾಗುತ್ತಾನೆಂದು ಕಾರ್ಯಕರ್ತರಿಗೆ ಹೇಳುವ ಮೂಲಕ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಲಸಿಕೆ ತಗೊಂಡಿದ್ದರೂ, ಆ್ಯಂಟಿಬಾಡಿ ಚಿಕಿತ್ಸೆ ಪಡೆದಿದ್ದರೂ ಒಮಿಕ್ರಾನ್​ ಬರಬಹುದು!; ಏಕೆಂದರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts