More

    ಸೀರೆ, ಬ್ಯಾಗ್ ಆಮಿಷಗಳಿಗೆ ಬಲಿಯಾಗಬೇಡಿ

    ತುಮಕೂರು: ಆಮಿಷ, ಆಣೆ, ಪ್ರಮಾಣಗಳಿಗೆ ಕಟ್ಟುಬೀಳದೆ ಅಭಿವೃದ್ಧಿಗೆ ಮತ ನೀಡುವಂತೆ ಬಿಜೆಪಿ ಅಭ್ಯರ್ಥಿ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.

    ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 33, 34ನೇ ವಾರ್ಡ್‌ನ ಕ್ಯಾತಸಂದ್ರ, ಎಸ್.ಎಲ್.ಎನ್.ನಗರ, ಎಳ್ಳಾರೆಬಂಡೆ, ಟಿವಿಎಸ್ ಲೇಔಟ್ ಹಾಗೂ ಸುತ್ತಮುತ್ತ ಬುಧವಾರ ರೋಡ್ ಶೋ ಮೂಲಕ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಸೀರೆ, ಬ್ಯಾಗ್, ಹಣ ಮತ್ತಿತರ ಆಮಿಷಗಳಿಗೆ ಬಲಿಯಾಗಬೇಡಿ. ದೇಶದ ಭವಿಷ್ಯಕ್ಕಾಗಿ ಮತದಾರರು ಬಿಜೆಪಿಗೆ ಮತದಾನ ಮಾಡಬೇಕು ಎಂದರು.

    ಮೋದಿ ಕೈಯಲ್ಲಿ ದೇಶದ ಭವಿಷ್ಯ

    ದೇಶದ ಭವಿಷ್ಯವು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿದೆ. ಶಾಂತಿ, ಸೌಹಾರ್ದದಿಂದ ಬದುಕುವ, ಸಾಮಾನ್ಯ ಕುಟುಂಬ ಕೂಡ ಸ್ವಾಭಿಮಾನದಿಂದ ಜೀವನ ನಡೆಸುವ ವಾತಾವರಣವನ್ನು ನರೇಂದ್ರ ಮೋದಿ ಅವರು ನಿರ್ಮಾಣ ಮಾಡಿದ್ದಾರೆ. ಇಡೀ ವಿಶ್ವವೇ ಮೆಚ್ಚುವ ರೀತಿಯಲ್ಲಿ ದೇಶವನ್ನು ಅವರು ಮುನ್ನಡೆಸುತ್ತಿದ್ದಾರೆ. ಆಗಿರುವ ಅಭಿವೃದ್ಧಿ ನೋಡಿ ಮತ ನೀಡಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಬಿಜೆಪಿಗೆ ಮತ ನೀಡಬೇಕು. ಮೋದಿ ಅವರ ಕೈ ಬಲಪಡಿಸಬೇಕು ಎಂದು ಜ್ಯೋತಿಗಣೇಶ್ ಹೇಳಿದರು.

    ನಗರದ ಕೆಲವು ವಾರ್ಡ್‌ಗಳನ್ನು ಸ್ಮಾರ್ಟ್‌ಸಿಟಿ ಯೋಜನೆ ಅಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. 33, 34ನೇ ವಾರ್ಡ್‌ಗಳಲ್ಲ್ಲೂ ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಉದ್ಯಾನವನಗಳನ್ನು ಸ್ಮಾರ್ಟ್‌ಗೊಳಿಸಲಾಗಿದೆ. ಈ ಹಿಂದೆ 20 ವರ್ಷಗಳಿಂದ ಆಗದ ಅಭಿವೃದ್ಧಿ ಕಾರ್ಯಗಳನ್ನು ಕಳೆದ ಐದೇ ವರ್ಷದಲ್ಲಿ ಕೈಗೊಳ್ಳಲಾಗಿದ್ದು ವಿರೋಧಿಗಳಿಗೆ ಈ ಅಭಿವೃದ್ಧಿ ನುಂಗಲಾರದ ಬಿಸಿತುಪ್ಪವಾಗಿದೆ ಎಂದರು.

    ಶಕ್ತಿ ಕೇಂದ್ರ, ಮಹಿಳಾ ತಂಡ, ವಾರ್ಡ್ ಸದಸ್ಯರು, ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts