More

    ದೆಹಲಿಯ ಮದ್ರಾಸ, ಶಾಲಾ ಕಾಲೇಜುಗಳಲ್ಲಿ ಹನುಮಾನ್​ ಚಾಲೀಸಾ ಪಠಣ ಕಡ್ಡಾಯ ಮಾಡಬೇಕು: ಕೇಜ್ರಿವಾಲ್​ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯ ಸಲಹೆ

    ನವದೆಹಲಿ: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಅಂತರದೊಂದಿಗೆ ಜಯಭೇರಿ ಭಾರಿಸಿರುವ ಎಎಪಿಯ ಅರವಿಂದ್​ ಕೇಜ್ರಿವಾಲ್​ಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯ್​ವರ್ಗೀಯಾ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ. ದೆಹಲಿಯ ಪ್ರತಿ ಶಾಲೆ ಮದ್ರಸಾಗಳಲ್ಲಿ ಹನುಮಾನ್​ ಚಾಲೀಸ ಪಠಿಸುವುದು ಕಡ್ಡಾಯ ಮಾಡಬೇಕೆಂದು ನೂತನ ಮುಖ್ಯಮಂತ್ರಿಯಲ್ಲಿ ಕೇಳಿಕೊಂಡಿದ್ದಾರೆ.

    ನೂತನ ಸಿಎಂಗೆ ಟ್ವಿಟ್ಟರ್​ನಲ್ಲಿ ಶುಭ ಹಾರೈಸಿರುವ ಕೈಲಾಶ್​ ಜಯ್​ವರ್ಗೀಯಾ, “ಹನುಮಾನ್​ ಜೀಯಲ್ಲಿ ನಂಬಿಕೆ ಇಡುವವರಿಗೆ ದೇವರು ಖಂಡಿತವಾಗಿಯೂ ಹರಸುತ್ತಾನೆ. ದೆಹಲಿಯ ಎಲ್ಲ ಶಾಲಾ ಕಾಲೇಜು, ಮದ್ರಾಸ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹನುಮಾನ್​ ಚಾಲೀಸ ಪಠಣವನ್ನು ಕಡ್ಡಾಯ ಮಾಡುವ ಸಮಯ ಬಂದಿದೆ. ದೆಹಲಿಯ ಮಕ್ಕಳು ಭಜರಂಗಿಯ ಕೃಪೆಯಿಂದ ಏಕೆ ವಂಚಿತರಾಗಬೇಕು?” ಎಂದು ಟ್ವೀಟ್​ ಮಾಡಿದ್ದಾರೆ.

    ಇಂದು ಬೆಳಗ್ಗೆ ಕೈಲಾಶ್​ ಜಯ್​ವರ್ಗೀಯಾವರು ಈ ಟ್ವೀಟ್​ ಮಾಡಿದ್ದು ಜನ ಸಾಮಾನ್ಯರು ಟ್ವೀಟ್​ನ ಕುರಿತಾಗಿ ಅಸಮಾಧಾನವನ್ನು ಹೊರ ಹಾಕಲಾರಂಭಿಸಿದ್ದಾರೆ. ಜಮ್ಮುವಿನಿಂದ ನಮ್ಮನ್ನು ಓಡಿಸಿದಿರಿ, ಆಮೇಲೆ ಬಂಗಾಳದಿಂದಲೂ ಓಡಿಸಿದಿರಿ ಈಗ ದೆಹಲಿಯಿಂದಲೂ ಓಡಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ತಮ್ಮ ಆಕ್ರೋಷವನ್ನು ವ್ಯಕ್ತ ಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts