ಬೆಂಗಳೂರು: ಬಿಜೆಪಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ನಿಂದ ವಲಸೆ ಬಂದಿದ್ದ ನಾಗರಾಜ ಛಬ್ಬಿ ಅವರಿಗೆ ಕಲಟಗಿಯಲ್ಲಿ ಮಣೆ ಹಾಕಿದೆ. ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಶಿಕ್ಷಗೆ ಗುರಿಯಾಗಿದ್ದ ಹಾವೇರಿಯ ನೆಹರೂ ಓಲೇಕಾರ್ ಹಾಗೂ ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಿದೆ.
ಚನ್ನಗಿರಿಯಲ್ಲಿ ಕಳಂಕಿತ ಮಾಡಾಳ್ ವಿರುಪಾಕ್ಷಪ್ಪ ಬದಲು ಶಿವಕುಮಾರ್ಗೆ ಹಾಗೂ ಬೈಂದೂರಿನಲ್ಲಿ ಸುಕುಮಾರ್ ಶೆಟ್ಟಿ ಬದಲು ಗುರುರಾಜ್ ಗಂಟಿಹೊಳೆ ಟಿಕೆಟ್ ನೀಡಲಾಗಿದೆ. ಕಲಟಗಿಯಲ್ಲೂ ಛಬ್ಬಿಗೆ ಟಿಕೆಟ್ ನೀಡಿದ್ದರಿಂದ ಹಾಲಿ ಶಾಸಕ ನಿಂಬಣ್ಣವರ್ಗೆ ಟಿಕೆಟ್ ಕೈತಪ್ಪಿದೆ. ಮಾಯಕೊಂಡದಲ್ಲಿ ಶಾಸಕ ನಿಂಗಣ್ಣ ಬದಲು ಬಸವರಾಜ ನಾಯ್ಕ್ ಅವಕಾಶ ಪಡೆದುಕೊಂಡಿದ್ದಾರೆ. ದಾವಣಗೆರೆ ಉತ್ತರದಲ್ಲಿ ರವೀಂದ್ರನಾಥ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಲೋಕಿಕೆರೆ ನಾಗರಾಜ್ ಅವಕಾಶ ಪಡೆದಿದ್ದಾರೆ.
ಬಿಜೆಪಿ ಮಂಗಳವಾರ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ&ಧಾರವಾಡ, ಕೆ.ಎಸ್. ಈಶ್ವರಪ್ಪ& ಶಿವಮೊಗ್ಗ, ಅರವಿಂದ ಲಿಂಬಾವಳಿ ಅವರ ಮಹಾದೇವಪುರ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಇನ್ನೂ 13 ಕ್ಷೇತ್ರಗಳಿಗೆ ಪ್ರಕಟಿಸುವುದು ಬಾಕಿ ಇದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿ ಸಂತೋಷ್ ಅರಸೀಕೆರೆಯಿಂದ ಆಕಾಂಯಾಗಿದ್ದರು. ಆದರೆ ಟಿಕೆಟ್ ನಿರಾಕರಿಸುವ ಮೂಲಕ ಶಾಕ್ ನೀಡಿದೆ. ಅರಸೀಕೆರೆಗೆ ಜಿವಿ ಬಸವರಾಜು ಅವರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಬಸವನ ಬಾಗೇವಾಡಿಯಿಂದ ಟಿಕೆಟ್ ನೀಡಲಾಗಿದೆ. ಹರಪ್ಪನಹಳ್ಳಿಯಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಕೆಜಿಎ್ನಲ್ಲಿ ಮಾಜಿ ಶಾಸಕ ಸಂಪಂಗಿ ಅವರ ಪತ್ನಿ ಅಶ್ವಿನಿಗೆ ಅವಕಾಶ ನೀಡಲಾಗಿದೆ.
ಬಿಜೆಪಿ ಎರಡನೇ ಪಟ್ಟಿ
ದೇವರ ಹಿಪ್ಪರಗಿ& ಸೋಮನಗೌಡ ಪಾಟೀಲ್
ಬಸವನಬಾಗೇವಾಡಿ& ಎಸ್.ಕೆ.ಬೆಳ್ಳುಬ್ಬಿ
ಇಂಡಿ& ಕೆ.ಬಿರಾದಾರ್
ಗುರುಮಿಟ್ಕಲ್& ಲಲಿತಾ ಅನಾಪುರ್
ಬೀದರ್& ಈಶ್ವರ್ ಸಿಂಗ್ ಠಾಕೂರ್
ಭಾಲ್ಕಿ& ಪ್ರಕಾಶ್ ಖಂಡ್ರೆ
ಗಂಗಾವತಿ& ಪರಣ್ಣ ಮುನವಳ್ಳಿ
ಕಲಟಗಿ& ನಾಗರಾಜ ಛಬ್ಬಿ
ಹಾನಗಲ್& ಶಿವರಾಜ್ ಸಜ್ಜನರ್
ಹಾವೇರಿ& ಗವಿಸಿದ್ದಪ್ಪ ದ್ಯಾಮಣ್ಣವರ್
ಹರಪನಹಳ್ಳಿ& ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ& ಲೋಕೀಕೆರೆ ನಾಗರಾಜ್
ದಾವಣಗೆರೆ ದಣ& ಅಜಯ್ ಕುಮಾರ್
ಮಾಯಕೊಂಡ& ಬಸವರಾಜ ನಾಯಕ್
ಚನ್ನಗಿರಿ& ಶಿವಕುಮಾರ್
ಬೈಂದೂರು& ಗುರುರಾಜ್ ಗಂಟಿಹೊಳೆ
ಮೂಡಿಗೆರೆ& ದೀಪಕ್ ದೊಡ್ಡಯ್ಯ
ಗುಬ್ಬಿ& ಎಸ್.ಡಿ.ದಿಲೀಪ್ ಕುಮಾರ್
ಶಿಡ್ಲಟ್ಟ& ರಾಮಚಂದ್ರ ಗೌಡ
ಕೋಲಾರ ಗೋಲ್ಡ್ ಫಿಲ್ಡ್ಡ್& ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ& ಚಿದಾನಂದ
ಅರಸೀಕೆರೆ& ಜಿ.ವಿ.ಬಸವರಾಜು
ಹೆಗ್ಗಡದೇವನಕೋಟೆ& ಕೃಷ್ಣಾ ನಾಯ್ಕ್