ಉತ್ತರಕನ್ನಡ: ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ರಾಜ್ಯದ ಅನೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ನಡೆಸುತ್ತಿದ್ದೆ. ಇದನ್ನು ಜನರನ್ನು ತಲುಪಲು ಮತ್ತು ವಿರೋಧಿ ಬಣಕ್ಕೆ ಪ್ರಶ್ನೆಗಳನ್ನು ಎಸೆಯಲು ಪಕ್ಷಗಳು ಬಳಸಿಕೊಳ್ಳುತ್ತಿವೆ. ಅದೇ ರೀತಿ ಕುಮಟಾದಲ್ಲಿ ಕಾಂಗ್ರೆಸ್ ಸಮಾವವೇಶವನ್ನು ನಡೆಸಿದ್ದು ಈ ಸಂದರ್ಭ ಬಿಜೆಪಿ ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಮೂರು ಪ್ರಶ್ನೆಗಳನ್ನು ನೀಡಿದೆ.
ಕಾರವಾರದಲ್ಲಿ ಬಿಜೆಪಿ ವಕ್ತಾರ ನಾಗರಾಜ ನಾಯಕ ಕಾಂಗ್ರೆಸ್ನ ಕಾಲೆಳೆದಿದ್ದು ‘ಕಾಂಗ್ರೆಸ್ ಅನ್ನೋದು ಸತ್ತ ಕುದುರೆ. ಏಷ್ಟೆ ಓಡಿಸಲು ಪ್ರಯತ್ನಿಸಿದರೂ ಅದು ಹೋಗೋದಿಲ್ಲ’ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ನ ಸಮಾವೇಶವನ್ನು ಜನರಲ್ಲಿ ಗೊಂದಲ ಮೂಡಿಸುವ ಸಭೆ ಎಂದು ಕರೆದಿದ್ದಾರೆ. ಈ ಸಂದರ್ಭ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ಗೆ ಬಿಜೆಪಿ ಪ್ರಶ್ನೆ ಕೇಳಿದೆ.
ಬಿಜೆಪಿ ಕೇಳಿದ ಪ್ರಶ್ನೆಗಳು ಹೀಗಿವೆ:
ಪ್ರಶ್ನೆ ೧: 2017 ಡಿಸೆಂಬರ್ ಎಂಟರಂದು ಅಂದಿನ ಜಿಲ್ಲಾಧಿಕಾರಿ ಸಹಜ ಸಾವೆಂದು ಹೇಳಿಕೆ ನೀಡಿದ್ದರು. ಪರೇಶ ಮೇಸ್ತಾ ಮೃತದೇಹದ ಪೋಸ್ಟ್ ಮಾರ್ಟಂ ಸ್ಥಳೀಯ ವೈದ್ಯರು ಅಥವಾ ನುರಿತ ಸರ್ಕಾರಿ ವೈದ್ಯರಿಂದ ಯಾಕೆ ಮಾಡಿಸಿಲ್ಲ?
ಪ್ರಶ್ನೆ ೨: ತನಿಖೆಯಾಗದೇ ಜಿಲ್ಲಾಧಿಕಾರಿ ಸಹಜ ಸಾವೆಂದು ಹೇಳಿಕೆ ನೀಡಿದ್ದೇಕೆ.? ಕಾಟಾಚಾರಕ್ಕಾಗಿ ಸಿಬಿಐಗೆ ಪ್ರಕರಣವನ್ನು ವಿಳಂಬವಾಗಿ ವಹಿಸಿದ್ದೇಕೆ?
ಪ್ರಶ್ನೆ ೩: ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಕಾಗದ ಪತ್ರಗಳನ್ನ ನೀಡಲಾಗಿತ್ತು. ಮುದ್ದೆ ಮಾಲನ್ನು ಯಾಕೆ ನೀಡಲಿಲ್ಲ?