More

    ಶ್ರೀ ರಂಭಾಪುರಿ ಜಗದ್ಗುರುಗಳ ಜನ್ಮದಿನೋತ್ಸವ

    ಹುಬ್ಬಳ್ಳಿ: ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 65ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕದ ಆಶ್ರಯದಲ್ಲಿ ಗುರುವಾರ ನಗರದ ವಿವಿಧೆಡೆ ಆಚರಿಸಲಾಯಿತು.

    ಹಳೇಹುಬ್ಬಳ್ಳಿ ವೀರಭದ್ರೇಶ್ವರ ದೇವಸ್ಥಾನ, ವಿದ್ಯಾನಗರದ ರೇಣುಕಾಚಾರ್ಯ ಮಂದಿರ, ದೇಸಾಯಿ ಓಣಿಯ ಶ್ರೀ ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಮಹಾರುದ್ರಾಭಿಷೇಕ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು.

    ನಗರದ ದುರ್ಗದ ಬೈಲ್​ನಲ್ಲಿ ಶ್ರೀರಂಭಾಪುರಿ ಜಗದ್ಗುರುಗಳ ಭಾವಚಿತ್ರ ಇಟ್ಟು ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಜನ್ಮದಿನೋತ್ಸವ ಆಚರಿಸಲಾಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು. 12 ಮಠದ ಬಾಲ ರೇವಣಸಿದ್ಧೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

    ಸದ್ಬೋಧನ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಮಾತನಾಡಿ, ‘ದುರ್ಗದ ಬೈಲ್ ಸರ್ಕಲ್​ನಲ್ಲಿ ಒಂದು ಚಿಕ್ಕ ಅನುಭವ ಮಂಟಪ ನಿಮಾಣ ಮಾಡಲು ಸಿದ್ಧವಿದ್ದೇವೆ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ರಾಜಕೀಯ ನಾಯಕರಿಗೆ ಮಾಹಿತಿ ನೀಡಿ ರಂಭಾಪುರಿ ಸರ್ಕಲ್ ದುರ್ಗದ ಬೈಲ್ ಎಂದು ಹೆಸರಿಡಲು ಒತ್ತಾಯಿಸಲಾಗುವುದು’ ಎಂದರು.

    ಗದಗಯ್ಯ ಹಿರೇಮಠ, ಬಸವರಾಜ ಚನ್ನೋಜಿ, ಸುಳ್ಳದ ಕುಂದಗೋಳಮಠ, ಗುರುಸಿದ್ಧ ಸಂಶಿ, ಮಂಜುನಾಥ ನಾಯ್ಕರ, ಬಸವರಾಜ ಪೂಜಾರ, ಪವನ ಬೆಂಗೇರಿ, ರಾಜಶೇಖರಯ್ಯ ಹಿರೇಮಠ, ವಿ.ಜಿ. ಪಾಟೀಲ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts