More

    ಬೀರೇಶ್ವರ ಸಂಸ್ಥೆಯಿಂದ ಉತ್ತಮ ಸೇವೆ

    ಚಿಕ್ಕೋಡಿ: ಯಕ್ಸಂಬಾದ ಬೀರೇಶ್ವರ ಸಹಕಾರಿ ವಿಶ್ವಾಸಾರ್ಹವಾಗಿದ್ದು, ಎಲ್ಲರನ್ನೂ ತಲುಪುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು.

    ಗೋವಾ ರಾಜ್ಯದ ಪೊಂಡಾ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೊಲ್ಲೆ ಗ್ರೂಪ್ ಅಂಗಸಂಸ್ಥೆ, ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ.(ಮಲ್ಟಿ-ಸ್ಟೇಟ್)ನ ಪೊಂಡಾ ಶಾಖೆ ಉದ್ಘಾಟಿಸಿ ಮಾತನಾಡಿದರು.

    ಅನೇಕ ವರ್ಷಗಳಿಂದ ಬೀರೇಶ್ವರ ಸಂಸ್ಥೆ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಇಂದು ಪೊಂಡಾ ಮತ್ತು ಟೀಸ್ಕ ಉಸಗಾಂವ ನಗರದಲ್ಲಿ ಶಾಖೆ ಉದ್ಘಾಟಿಸಲಾಗಿದೆ. ಬೀರೇಶ್ವರ ಸಹಕಾರಿ ವ್ಯವಹಾರದ ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ. ಇದು ಗೋವಾ ರಾಜ್ಯದ ಆರ್ಥಿಕ ಪ್ರಗತಿಗೂ ಸಹಕಾರಿಯಾಗಿದೆ. ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಶಾಖೆಯನ್ನು ಪ್ರಗತಿಪಥದಲ್ಲಿ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

    ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಬೀರೇಶ್ವರ ಸಂಸ್ಥೆ ನಡೆದು ಬಂದ ದಾರಿ ಹಾಗೂ ಸಂಸ್ಥೆಯ ಸೇವೆಗಳ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

    ಕನ್ನಡ ಸಾಹಿತ್ಯ ಪರಿಷತ್ ಗೋವಾ ಘಟಕದ ಅಧ್ಯಕ್ಷ ಸಿದ್ದಣ್ಣ ಮೇಟಿ, ಖ್ಯಾತ ಉದ್ಯಮಿ ಶಾಂತಾರಾಮ ಕೊಳವೆನಕರ,
    ನಗರಸಭೆ ಸದಸ್ಯರಾದ ದೀಪಾ ಕೊಳವೆನಕರ, ವೀರೇಂದ್ರ ಡವಳಿ, ಅಪೂರ್ವಾ ದಳವಿ, ಚಂದ್ರಕಾಂತ ಪಾಟೀಲ, ಸಂಸ್ಥೆಯ ಮುಖ್ಯಕಚೇರಿ ಅಧ್ಯಕ್ಷ ಜಯಾನಂದ ಜಾಧವ, ಉಪಾಧ್ಯಕ್ಷ ಸಿದ್ರಾಮ ಗಡದೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಶರದ ಜಂಗಟೆ, ಪ್ರಧಾನ ವ್ಯವಸ್ಥಾಪಕ ರವೀಂದ್ರ ಚೌಗಲಾ, ಉಪಪ್ರಧಾನ ವ್ಯವಸ್ಥಾಪಕ ಬಹದ್ದೂರ್ ಗುರವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts