More

    ಬೈಕ್‌ನಲ್ಲಿ ಬಂದ ಖದೀಮರ ಕೈಚಳಕ

    ಹೊಸಪೇಟೆ: ಬೈಕ್‌ನಲ್ಲಿ ಬಂದ ಖದೀಮರು ವಾಯು ವಿಹಾರಕ್ಕೆ ತೆರಳಿದ್ದ ವೃದ್ಧೆಯೊಬ್ಬರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಸೋಮವಾರ ಕಳುವು ಮಾಡಿ ಪರಾರಿಯಾಗಿದ್ದಾರೆ.

    ಇಲ್ಲಿನ ಆಕಾಶವಾಣಿ ನಗರದ ಮದಕರಿ ಶಾಲೆ ಸಮೀಪದ ನಿವಾಸಿ ಶಾರದಾ ಕುರಂದವಾಡ್(62) ಮಾಂಗಲ್ಯ ಸರ ಕಳ್ಳತನವಾಗಿದೆ. ಸೋಮವಾರ ಬೆಳಗ್ಗೆ ಶಾರದಾ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದು, 6.15ರ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು, ವೃದ್ಧೆಯ ಚಲನವಲನ ಗಮನಿಸಿ, ಕೆಲ ಸಮಯ ಹಿಂಬಾಲಿಸಿದ್ದಾರೆ. ಬಳಿಕ ಸಮಯ ನೋಡಿ ವೃದ್ಧೆಯ ಕೊರಳಿಗೆ ಕೈಹಾಕಿದ್ದು, ಕ್ಷಣಮಾತ್ರದಲ್ಲಿ 1.75 ಲಕ್ಷ ರೂ. ಮೌಲ್ಯದ 3.5 ತೊಲೆ ಚಿನ್ನದ ಸರವನ್ನು ಕಳುವು ಮಾಡಿ, ಪರಾರಿಯಾಗಿದ್ದಾರೆ. ಕೃತ್ಯದ ಸಂಪೂರ್ಣ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts