ಬೀದರ್: ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದೊಳಗೆ ಕಾರು ನುಗ್ಗಿ ಡಿಕ್ಕಿ ಹೊಡೆದ ಪರಿಣಾಮ ವೃತ್ತದ ಸುತ್ತ ಹಾಕಿರುವ ಸರಪಳಿ ಕಿತ್ತು ಹೋಗಿದೆ.
ಡಿಕ್ಕಿ ಹೊಡೆದ ಇಂಡಿಕಾ ಕಾರಿನಲ್ಲಿ ಇಬ್ಬರು ಸಂಚರಿಸುತ್ತಿದ್ದರು. ಆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೌಬಾರಾದಿಂದ ನೇರವಾಗಿ ಬಂದು ಬಸವೇಶ್ವರ ವೃತ್ತಕ್ಕೆ ನುಗ್ಗಿಸಲಾಗಿದೆ.
ವೃತ್ತಕ್ಕೆ ಡಿಕ್ಕಿ ಹೊಡೆದ ನಂತರ ಕಾರನ್ನು ಹಿಂದೆಗೆದು ಪಕ್ಕದ ಪೆಟ್ರೋಲ್ ಪಂಪ್ನಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು. ಘಟನೆ ನಂತರ ಎಚ್ಚೆತ್ತ ಸಮಾಜದವರು, ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದರು.
ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.