More

    ಬೀದರ್​ ನಗರದ ಬಸವೇಶ್ವರ ವೃತ್ತದೊಳಗೆ ನುಗ್ಗಿದ ಕಾರು; ವೃತ್ತದ ಸರಪಳಿ ಹಾನಿ, ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

    ಬೀದರ್: ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದೊಳಗೆ ಕಾರು ನುಗ್ಗಿ ಡಿಕ್ಕಿ ಹೊಡೆದ ಪರಿಣಾಮ ವೃತ್ತದ ಸುತ್ತ ಹಾಕಿರುವ ಸರಪಳಿ ಕಿತ್ತು ಹೋಗಿದೆ.

    ಡಿಕ್ಕಿ ಹೊಡೆದ ಇಂಡಿಕಾ ಕಾರಿನಲ್ಲಿ ಇಬ್ಬರು ಸಂಚರಿಸುತ್ತಿದ್ದರು. ಆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೌಬಾರಾದಿಂದ ನೇರವಾಗಿ ಬಂದು ಬಸವೇಶ್ವರ ವೃತ್ತಕ್ಕೆ ನುಗ್ಗಿಸಲಾಗಿದೆ.

    ವೃತ್ತಕ್ಕೆ ಡಿಕ್ಕಿ ಹೊಡೆದ ನಂತರ ಕಾರನ್ನು ಹಿಂದೆಗೆದು ಪಕ್ಕದ ಪೆಟ್ರೋಲ್ ಪಂಪ್​ನಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು. ಘಟನೆ ನಂತರ ಎಚ್ಚೆತ್ತ ಸಮಾಜದವರು, ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದರು.

    ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts