More

    ಕರೊನಾ ಮುಕ್ತಿಗಾಗಿ ಪ್ರದೋಷ ಪೂಜೆ

    ಭರಮಸಾಗರ: ಇಲ್ಲಿನ ಐತಿಹಾಸಿಕ ಶ್ರೀ ಭವಾನಿ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ಲೋಕಕಲ್ಯಾಣಾರ್ಥ ಹಾಗೂ ಕರೊನಾ ವೈರಸ್‌ನಿಂದ ದೇಶದ ಮುಕ್ತಿಗಾಗಿ ವಿಶೇಷ ಪ್ರದೋಷ ಪೂಜೆ ನಡೆಸಲಾಯಿತು.

    ರುದ್ರಪಾರಾಯಣ, ಪಂಚಾಮೃತ ಅಭಿಷೇಕ, ಲಘುನ್ಯಾಸ ಪೂರ್ವಕ ರುದ್ರಾಭಿಷೇಕ, ಅಷ್ಟಾವಧಾನ ಸೇವೆಗಳು ನೆರವೇರಿದವು. ಲಾಕ್‌ಡೌನ್ ಇರುವುದರಿಂದ ದೇವಸ್ಥಾನದ ಅರ್ಚಕ ಚಂದ್ರಶೇಖರ್ ಒಬ್ಬರೇ ಪೂಜಾ ಕೈಂಕರ್ಯ ನಡೆಸಿಕೊಟ್ಟರು.

    ಪೂಜೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಕೈಶುಚಿಗೊಳಿಸಿಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಕೂರುವಂತೆ ಆದೇಶಿಸಲಾಗಿತ್ತು. ರಾತ್ರಿ ದೀಪಾರತಿ ಮೂಲಕ ಭಾರತಕ್ಕೆ ಬಂದಿರುವ ಕರೊನಾ ಸಂಕಷ್ಟ ದೂರಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

    ದೇವಸ್ಥಾನದ ಪ್ರಧಾನ ಅರ್ಚಕ ಹುಲ್ಲೂರು ಆರ್.ಕೃಷ್ಣಾಜೋಯಿಸ್ ಮಾತನಾಡಿ, ಎಲ್ಲರೂ ಮನೆಯಲ್ಲೇ ಇದ್ದು ದೇವರ ನಾಮ ಸಂಕೀರ್ತನೆಗಳನ್ನು ಮಾಡುತ್ತಾ ಆರೋಗ್ಯ ಕಾಪಾಡಿಕೊಳ್ಳಬೇಕು. ಕಣ್ಣಿಗೆ ಕಾಣದ ವೈರಸ್ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.

    ಬಸೆಟ್ರು ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts