More

    ರವಿ ಶೆಟ್ಟಿಯಾಳ್‌ಗೆ ಬಳೆ ಮುದ್ರಾಧಾರಣೆ


    ಗುರುಪುರ(ದ.ಕ): ಕಾರಮೊಗರುವಿನ ಶ್ರೀಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಗಡಿಕಾರ ಅಗ್ನಿದುರ್ಗಾ ರವಿ ಶೆಟ್ಟಿಯಾಳ್ ಯಾನೆ ಡಾ.ರವಿರಾಜ ಶೆಟ್ಟಿ ಕಾರಮೊಗರುಗುತ್ತು ಅವರಿಗೆ ಭಾನುವಾರ ಅಗ್ನಿದುರ್ಗಾ ದೇವಸ್ಥಾನದಲ್ಲಿ ಬಳೆ ಮುದ್ರಾಧಾರಣೆ ನಡೆಯಿತು.
    ಗುರುಪುರ ಶ್ರೀಜಂಗಮ ಸಂಸ್ಥಾನ ಮಠದ ರುದ್ರಮುನಿ ಸ್ವಾಮಿ ಉಪಸ್ಥಿತಿಯಲ್ಲಿ ಅಗ್ನಿದುರ್ಗಾ ದೇವಸ್ಥಾನದಲ್ಲಿ ಅರ್ಚಕ ಸುಬ್ರಹ್ಮಣ್ಯ ಭಟ್ ವಿಶೇಷ ಪೂಜೆ ನಡೆಸಿದರು. ಬಳಿಕ ಬಳೆ ಪ್ರದಾನ ಮಾಡಲಾಯಿತು.
    ಗಡಿಕಾರ ಅಗ್ನಿದುರ್ಗಾ ರವಿ ಶೆಟ್ಟಿಯಾಳ್ ಅವರ ತಂದೆ ಕಿಲ್ಲೂರುಗುತ್ತು ರಮಾನಾಥ ಶೆಟ್ಟಿ, ಸಹೋದರ ಸಂತೋಷ ಶೆಟ್ಟಿ, ಗೋಳಿದಡಿಗುತ್ತು ಡಾ.ಶಿವಪ್ರಸಾದ್ ಶೆಟ್ಟಿ, ಗುರುಪುರ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಭಂಡಾರದಮನೆ ಶ್ರೀಧರ ಪೂಜಾರಿ, ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು, ಅನಿಲ್ ಕುಮಾರ್ ಶೆಟ್ಟಿ ಬೆಳ್ಳೂರುಗುತ್ತು, ಶೇಖರ ಶೆಟ್ಟಿ ಕಲ್ಲಕಲಂಬಿ ದೋಣಿಂಜೆಗುತ್ತು, ಬಾಲಕೃಷ್ಣ ಅಡಪ ಬಡಕರೆಗುತ್ತು, ಸೋಮಶೇಖರ ಅಡ್ಯಂತಾಯ ಮರಂಕರಿಯಗುತ್ತು, ಸುಜೀತ್ ಆಳ್ವ ಏತಮೊಗರುಗುತ್ತು, ಗಡಿಕಾರ ದಿನೇಶ್ ಹೆಗ್ಡೆ ಮೂಲ್ಕಿ ಮಾನಂಪಾಡಿ, ಗಡಿಕಾರ ಬಜ್ಪೆಗುತ್ತು ಭುಜಂಗ ಶೆಟ್ಟಿ, ದೇವಂದಬೆಟ್ಟು ಶ್ರೀಸೋಮನಾಥ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ, ಡಾ.ರಘುವೀರ ಪೈ ಮಣಿಪಾಲ, ದಿನೇಶ್ಚಂದ್ರ ಬಜಾಲ್, ಪ್ರಹ್ಲಾದ್ ಶೆಟ್ಟಿ ಜಟ್ತಿಲ, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಗಡಿಕಾರ ತಿಬಾರುಗುತ್ತು ಉಮೇಶ್ ಶೆಟ್ಟಿ, ತೋಕೂರುಗುತ್ತು ಪ್ರಶಾಂತ್ ಭಂಡಾರಿ, ಗುರುಪುರ ಪಂಚಾಯಿತಿ ಸದಸ್ಯರಾದ ರಾಜೇಶ್ ಸುವರ್ಣ, ಸುನೀಲ್ ಜಲ್ಲಿಗುಡ್ಡೆ ಹಾಗೂ ಹಲವು ಗುತ್ತುಮನೆತನದ ಗಡಿಕಾರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts