More

    ಅಕ್ರಮ ಮದ್ಯ ಸಾಗಣೆ ಆರೋಪ; ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯಗೆ ನೋಟಿಸ್​ ರವಾನಿಸಿದ ಬಿ.ವಿ. ಶ್ರೀನಿವಾಸ್​

    ನವದೆಹಲಿ: ಕೋವಿಡ್​ ಲಾಕ್​ಡೌನ್​ ಅವಧಿಯಲ್ಲಿ ಅಕ್ರಮ ಮದ್ಯ ಸಾಗಿಸಿ ತಮ್ಮ ಮಾಲೀಕತ್ವದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ವಕ್ತಾರ ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯ ಅವರಿಗೆ ಯುವ ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ ನೋಟಿಸ್​ ಜಾರಿ ಮಾಡಿದ್ದಾರೆ.

    ಶ್ರೀನಿವಾಸ್​ ಅವರ ಮಾಲೀಕತ್ವದ ಸ್ಕಾರ್ಪಿಯೋದಲ್ಲಿ ಯುವ ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಯಲಗುಡ್ಡ ಶ್ರವಣ ರಾವ್​ ಮತ್ತು ಬೆಂಗಳೂರು ಮೂಲದ ಮನೀಶ್​ ಬಸವರಾಜ ಶಿಲ್ಲೆ ಗುರುಗ್ರಾಮದಿಂದ ದೆಹಲಿ ಮೂಲಕ ಹರಿಯಾಣಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದರು ಎಂದು ಸಂಬಿತ್​ ಪಾತ್ರಾ ಹಾಗೂ ಅಮಿತ್​ ಮಾಳ್ವೀಯ ಆರೋಪಿಸಿದ್ದರು.

    ಅಲ್ಲದೆ, ಈ ಸಂಬಂಧ ಟ್ವೀಟ್​ ಮಾಡಿ, ಅದನ್ನು ರಾಹುಲ್​ ಗಾಂಧಿ ಅವರಿಗೆ ಟ್ಯಾಗ್​ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ಅಲ್ಲಗಳೆದಿರುವ ಬಿ.ವಿ. ಶ್ರೀನಿವಾಸ್​, ಇದೊಂದು ಸುಳ್ಳು ಸುದ್ದಿ. ಕೋವಿಡ್​ ತುರ್ತು ಕಾರ್ಯದ ಪಾಸ್​ ಹೊಂದಿದ್ದ ತಮ್ಮ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಕೋರ್ಟ್​ನಲ್ಲಿ ಭೇಟಿ ಮಾಡುವುದಾಗಿ ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯ ಅವರಿಗೆ ಸವಾಲು ಹಾಕಿದ್ದಾರೆ.

    ಹಣ್ಣುಗಳ ರಾಜ ತಾ ಬಂದಾ… ಮಾವು ಟಿಕ್​, ಟಿಕ್​… ಮಾವು ಟಿಕ್​, ಟಿಕ್​… ಮಾವಿನಹಣ್ಣು ತಿನ್ನುವುದರ ಲಾಭ ಏನು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts