ಬೆಂಗಳೂರು: ‘ಟೂಥ್ ಪೇಸ್ಟ್ಲ್ಲಿ ಉಪ್ಪು, ಆರ್ಸಿಬಿ ಕಪ್ಪು, ಆವಾಗ ಮೋಗ್ಲಿ, ಈವಾಗ ಕೊಹ್ಲಿ, ಮಣ್ಣು ತೆಗಿಯೋದು ಜೆಸಿಬಿ, ಕಪ್ ಹೊಡೆಯೋದು ಆರ್ಸಿಬಿ …’ ಹೀಗೆ ಆರ್ಸಿಬಿ ತಂಡದ ಸಲುವಾಗಿಯೇ ಕಲರ್ಫುಲ್ ಹಾಡೊಂದನ್ನು ಚಿತ್ರದಲ್ಲಿ ಅಳವಡಿಸಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.
ಅಂದಹಾಗೆ, ಶುಕ್ರವಾರ ‘ಅವತಾರ್ ಪುರುಷ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಆಗಿದೆ. ಪಕ್ಕಾ ಶರಣ್ ಶೈಲಿಯಲ್ಲಿಯೇ ಹಾಡು ಮೂಡಿಬಂದಿದ್ದು, ಶರಣ್ ಅವರಿಂದ ಅದ್ಬುತವಾದ ನೃತ್ಯವನ್ನು ಹೊರತೆಗಿಸಿದ್ದಾರೆ ಕೋರಿಯೋಗ್ರಾಫರ್ ಭೂಷಣ್.
ಟಪ್ಪಾಂಗುಚ್ಚಿ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವ್ಯಾಸ್ ರಾಜ್ ಹಾಡಿಗೆ ಧ್ವನಿಯಾಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ‘ಅವತಾರ್ ಪುರುಷ’ ಚಿತ್ರದಲ್ಲಿ ಶರಣ್ಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ.
ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಶುರುವಾಯ್ತು ಕಿರಿಕಿರಿ: ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಕೋರ್ಟ್ ವಾರೆಂಟ್