More

    ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಆಟೋ ಚಾಲಕ

    ತುಮಕೂರು: ಮಳೆ ನೀರಿನಲ್ಲಿ ಆಟೋಚಾಲಕನೊಬ್ಬ ಕೊಚ್ಚಿಕೊಂಡು ಹೋದಂಥ ಪ್ರಕರಣವೊಂದು ನಡೆದಿದ್ದು, ಆಟೋ ಪತ್ತೆಯಾಗಿದೆ. ಚಾಲಕನಿಗಾಗಿ ಹುಡುಕಾಟ ಮುಂದುವರಿದಿದೆ. ತುಮಕೂರು ಜಿಲ್ಲೆಯಲ್ಲಿ ಈ ಅವಘಡ ಉಂಟಾಗಿದೆ.

    ತುಮಕೂರು ನಗರದ ರಿಂಗ್ ರಸ್ತೆಯ ಧಾನ್ಹಾ ಪ್ಯಾಲೇಸ್ ಸಮೀಪ ಇಂದು ಈ ಘಟನೆ ನಡೆದಿದೆ. ಮರಳೂರು ದಿಣ್ಣೆ ನಿವಾಸಿ, ಆಟೋಚಾಲಕ ಅಮ್ಜದ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ವ್ಯಕ್ತಿ. ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಆಟೋದಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

    ರಿಂಗ್‌ ರಸ್ತೆಯ ಧಾನ್ಹಾ ಪ್ಯಾಲೇಸ್‌ ಕಡೆಯಿಂದ ಗುಬ್ಬಿಗೇಟ್‌ ಕಡೆ ಅಮ್ಜದ್​ ಸಾಗುತ್ತಿದ್ದು, ಈತನ ಆಟೋ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಬಂದು ಶೋಧ ಕಾರ್ಯಾಚರಣೆ ನಡೆಸಿದೆ. ಅದಾಗ್ಯೂ ಅಮ್ಜದ್ ಪತ್ತೆ ಆಗಿಲ್ಲ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ತುಂಡಾದ ವಿದ್ಯುತ್ ತಂತಿ ತುಳಿದು ರೈತರಿಬ್ಬರ ದುರ್ಮರಣ!

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಕನ್ನಡ ತಪ್ಪಾಗಿ ಬರೆದು ಸರ್ಕಾರಿ ಆದೇಶ; ಸಂಬಂಧಿತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts