ಹಾಸನ: ಜಮೀನು ವಿವಾದದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುನೀಲ್ ಎಂಬುವರ ಮೇಲೆ ಐದು ಜನರ ಗುಂಪು ತೀವ್ರ ಹಲ್ಲೆ ಮಾಡಿದೆ.
ತೋಟವೊಂದರಲ್ಲಿ ತೆಂಗಿನ ಗರಿ ಮಟ್ಟೆಯಲ್ಲಿ ಸುನೀಲ್ ಅವರಿಗೆ ಹೊಡೆದಿದ್ದಾರೆ. ಅವರು ತಪ್ಪಿಸಿಕೊಂಡು ಹೋದರೂ ಬಿಡಲಿಲ್ಲ. ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮದನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಧನಂಜಯ್, ಸತೀಶ್, ಕುಮಾರ್ ಹಾಗೂ ನಟೇಶ್ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಡೆದಾಟದಲ್ಲಿ ಗಾಯಗೊಂಡ ಸುನೀಲ್ ಸೇರಿ ಮತ್ತಿತರರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್)