More

    ಮಹಿಳೆ ಮೇಲೆ ಅಮಾನುಷ ಹಲ್ಲೆ

    ಮಂಗಳೂರು/ಉಪ್ಪಿನಂಗಡಿ: ಮಹಿಳೆ ಮೇಲೆ ತಂಡವೊಂದು ಅಮಾನುಷ ರೀತಿ ಹಲ್ಲೆ ನಡೆಸಿದ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಜೆ ವೇಳೆ ಪೊಲೀಸರು ಪ್ರಕರಣವನ್ನು ಪತ್ತೆ ಮಾಡಿದ್ದು, ಹಲ್ಲೆ ಮಾಡಿದ್ದ ಮಹಿಳೆಯ ವಿರುದ್ಧ ಆಕೆಯ ಪತಿಯೇ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.

    ಶಹನಾಜ್ ಹಲ್ಲೆಗೊಳಗಾದವರು. ಹಸೀನಾ ಹಾಗೂ ಅಫ್ರಿದಿ ಹಲ್ಲೆ ಆರೋಪಿಗಳು. ಹಸೀನಾರ ಪತಿ ಬಂಟ್ವಾಳ ಬೆಂಗತ್ತೋಡಿ ಗ್ರಾಮದ ಕಾವಳಕಟ್ಟೆ ನಿವಾಸಿ ಅಬ್ದುಲ್ ರಹಿಮಾನ್ ತನ್ನ ಪತ್ನಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿರುವ ಅಬ್ದುಲ್ ರಹಿಮಾನ್ ಅವರ ಗುಜರಿ ಅಂಗಡಿಯಲ್ಲಿ ನ.21ರಂದು ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದೆ.

    ಅಬ್ದುಲ್ ರಹಿಮಾನ್ ಅವರು ಪರಿಚಯದ ಶಹನಾಜ್ ಅವರೊಂದಿಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಏಕಾಏಕಿ ಬಂದ ಪತ್ನಿ ಹಸೀನಾ ಹಾಗೂ ವಾಹನ ಚಾಲಕ ಅಫ್ರಿದಿ ಎಂಬುವರು ಅಬ್ದುಲ್ ರಹಿಮಾನ್ ಜತೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಶಹನಾಜ್‌ರನ್ನು ಅವಾಚ್ಯ ಪದಗಳಿಂದ ಬೈದು ಮುಖ ಹಾಗೂ ತಲೆಗೆ ಹೊಡೆದರು. ಅಫ್ರಿದಿ ಪ್ಲಾಸ್ಟಿಕ್ ಪೈಪ್‌ನಲ್ಲಿ ಶಹನಾಜ್‌ರ ಬೆನ್ನು ಹಾಗೂ ತಲೆಗೆ ಹೊಡೆದು, ಇನ್ನು ಮುಂದೆ ಇಲ್ಲಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿ ಹೋಗಿದ್ದಾರೆ. ಬಳಿಕ ಶಹನಾಜ್ ಕೂಡ ಅಲ್ಲಿಂದ ಹೋಗಿದ್ದಾರೆ. ಕಾನೂನಿನ ಅರಿವು ಇಲ್ಲದ ಕಾರಣ ತಡವಾಗಿ ದೂರು ನೀಡಲಾಗಿದೆ ಎಂದು ತಿಳಿಸಿದ ಅಬ್ದುಲ್ ರಹಿಮಾನ್, ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಮಹಿಳೆಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುವುದು.
    – ಹೃಷಿಕೇಶ್ ಸೋನಾವಣೆ
    ಎಸ್ಪಿ, ದ.ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts