ರಾಣೆಬೆನ್ನೂರ: ನಗರದಲ್ಲಿ ಬೈಕ್ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ ಇಲ್ಲಿಯ ಶಹರ ಠಾಣೆ ಪೊಲೀಸರು, 3.50 ಲಕ್ಷ ರೂ. ಮೌಲ್ಯದ 6 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ನಿವಾಸಿ ಷಣ್ಮುಖ ಕೆ.ಜಿ. ಮರಳಸಿದ್ದಪ್ಪ (40) ಬಂಧಿತ ಆರೋಪಿ.
ಈತ ನಗರದಲ್ಲಿ 2, ದಾವಣಗೆರೆಯಲ್ಲಿ 2 ಹಾಗೂ ಹರಿಹರದಲ್ಲಿ 2 ಸೇರಿ ಒಟ್ಟು 6 ಬೈಕ್ಗಳನ್ನು ಕಳವು ಮಾಡಿದ್ದ. ಈ ಕುರಿತು ಶಹರ ಠಾಣೆ ಪೊಲೀಸರು ಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಟಿ.ವಿ. ಸುರೇಶ, ಸಿಪಿಐ ಎಂ.ಐ. ಗೌಡಪ್ಪಗೌಡ್ರ, ಪಿಎಸ್ಐ ಪ್ರಭು ಕೆಳಗಿನಮನಿ, ಎಎಸ್ಐ ಎಚ್.ಎನ್. ದೊಡ್ಡಮನಿ ಹಾಗೂ ಸಿಬ್ಬಂದಿಯಾದ ಕೆ.ಎಚ್. ಸವೂರ, ಎಚ್.ಎಲ್. ದನುವಿನಮನಿ, ಪಿ.ಕೆ. ಸನದಿ, ಮಂಜುನಾಥ ಕುಂಟಗೌಡ್ರ, ವಿಠಲ್ ಡಿ.ಬಿ., ಸಚೀನ ಓಲೇಕಾರ, ಮಂಜುನಾಥ ಕೆಂಗೊಂಡ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.