More

    ಜಿಂಕೆ ಕೊಂದ ಆರೋಪಿಗಳ ಬಂಧನ

    ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ವನ್ಯಜೀವಿ ವಲಯದ ವಿರ್ನೋಲಿ ಅರಣ್ಯ ಸ.ನಂ 48 ರಲ್ಲಿ ಉರುಳು ಹಾಕಿ ಜಿಂಕೆ ಕೊಂದ ಆರೋಪಿಗಳನ್ನು ಬುಧವಾರ ರಾತ್ರಿ ಬಂಧಿಸಿ, 25.72 ಕೆಜಿ ಮಾಂಸ ಮತ್ತು ತಲೆ , 11.10 ಕೆಜಿ ಚರ್ಮ ವಶಕ್ಕೆ ಪಡೆಯಲಾಗಿದೆ.

    ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹಂಚಿಕೊಂಡಿದ್ದ ಆರೋಪಿಗಳಾದ ಕೃಷ್ಣಾ ವಿಷ್ಣು ಕಲ್ಮೋಲಕರ, ಮಂಜುನಾಥ ವಿಷ್ಣು ಕಲ್ಮೋಲಕರ, ಸುರೇಶ ಅಂಬು ಮುದಾಯಕರ, ಕೇಶವ ಬಾರಕೇಲೋ ಹರಿಜನ, ಉಮಾಕಾಂತ ನಾರಾಯಣ ಧರಣಿ, ಉಮೇಶ ನಾರಾಯಣ ಧರಣಿ, ವಿಷ್ಣು ಕೃಷ್ಣಾ ಕಲ್ಮೋಲಕರ ಸೇರಿದಂತೆ ಒಟ್ಟು 7 ಜನರಲ್ಲಿ 3 ಆರೋಪಿಗಳನ್ನು ಬಂಧಿಸಿ ವನ್ಯಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

    ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಸಿ.ಎಫ್. ನೀಲೇಶ ಶಿಂಧೆ, ಎ.ಸಿ.ಎಫ್ ಅಮರಾಕ್ಷರ ಎಂ.ವಿ. ಅವರ ಮಾರ್ಗದರ್ಶನದಲ್ಲಿ ಪಣಸೋಲಿ ಆರ್.ಎಫ್.ಒ ರಶ್ಮಿ ದೇಸಾಯಿ , ಡಿ.ಆರ್.ಎಫ್.ಒಗಳಾದ ಅಣ್ಣಪ್ಪ ಮುದಕಣ್ಣವರ ಮತ್ತು ಶೇಖರ ಪಮ್ಮಾರ, ಪರಮೇಶ್ವರ ಪಾಟೀಲ, ಹೈದರ ಅಲಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts