ಅರಕೇರಾ: ರಂಜಾನ್ ಮಾಸಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಹಿಂದು ಯುವಕರು ಮುಸ್ಲಿಮರಿಗೆ ಗುರುವಾರ ಇಫ್ತಿಯಾರ್ ಕೂಟ ಆಯೋಜಿಸುವ ಮೂಲಕ ಸಾಮರಸ್ಯ ಸಾರಿದರು. ಹಿಂದು ಹಾಗೂ ಮುಸ್ಲಿಂ ಸಮುದಾಯದರು ಕೇಸರಿ ಶಾಲುಗಳನ್ನು ಹಾಕಿಕೊಂಡು ಐಕ್ಯತೆ ಪ್ರದರ್ಶಿಸಿದರು.
ಇದನ್ನೂ ಓದಿ: ರಾಯಚೂರು ಜಿಲ್ಲೆಯಾದ್ಯಂತ ಭಕ್ತಿ, ಶ್ರದ್ಧೆಯಿಂದ ರಂಜಾನ್ ಆಚರಣೆ
ಗೆಳೆಯರ ಬಳಗದ ಮಹಾಂತೇಶ ಪೂಜಾರಿ ಮಾತನಾಡಿ, ಹಿಂದು ಹಾಗೂ ಮುಸ್ಲಿಮರ ನಡುವೆ ಬಾಂಧವ್ಯ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು. ಎರಡೂ ಧರ್ಮಗಳ ಧಾರ್ಮಿಕ ಆಚರಣೆಗಳಲ್ಲಿ ಪರಸ್ಪರ ಭಾಗಿಯಾಗಬೇಕು. ಸಮಾಜದಲ್ಲಿ ಕೆಟ್ಟ ಸಂದೇಶವನ್ನು ಯಾರೂ ಬಿತ್ತಬಾರದು. ಕೆಟ್ಟ ಸಂದೇಶ ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ಸಂಸ್ಕಾರವಂತ ಸಮಾಜಗಳು ನಿರ್ಮಾಣ ಆದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.