ನವದೆಹಲಿ: ಉಗ್ರ ಸಂಘಟನೆಗಳು ಭಾರತದ ವಿರುದ್ಧ ಪ್ರತೀಕಾರಕ್ಕೆ ಹಾತೊರೆಯುತ್ತಿವೆ. ಅಲ್ಕೈದಾದ ಭಾರತೀಯ ಉಪಖಂಡದ ವಿಭಾಗ (ಎಕ್ಯೂಐಎಸ್) ಪ್ರತೀಕಾರಕ್ಕೆ ಚಿಂತನೆ ನಡೆಸಿದರೆ, ಐಎಸ್ಐಎಸ್ನ ಸಹ ಸಂಘಟನೆ ಹಿಂದ್ ವಿಲಾಯಾಹ್ ಈಗಾಗಲೇ ತನ್ನ ನೆಲೆಯನ್ನು ಕರ್ನಾಟಕ ಕೇರಳದಲ್ಲಿ ಬಲಪಡಿಸತೊಡಗಿದೆ. ಅಲ್ಲಿ 180-200 ಉಗ್ರರು ಈಗಾಗಲೇ ಇದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ವರದಿ ಎಚ್ಚರಿಸಿದೆ.
ಹಿಂದ್ ವಿಲಾಯಾಹ್ ಎಂಬ ಉಗ್ರ ಸಂಘಟನೆ ಭಾರತದಲ್ಲಿ ಐಎಸ್ಐಎಸ್ ಉಗ್ರಸಂಘಟನೆಯ ಸಹಸಂಘಟನೆಯಾಗಿದ್ದು, 180-200 ಉಗ್ರ ಸದಸ್ಯರಿದ್ದಾರೆ ಎಂದು 2019ರ ಮೇ 19ರಂದು ಘೋಷಿಸಿತ್ತು. ಇದೂ ಸೇರಿ ಬೇರೆ ಬೇರೆ ಅಂಶಗಳು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಅನಲಿಟಿಕಲ್ ಸಪೋರ್ಟ್ ಆ್ಯಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ಟೀಂ ಗುರುವಾರ ಬಿಡುಗಡೆ ಮಾಡಿರುವ 26ನೇ ವರದಿಯಲ್ಲಿದೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ವೆನಿಜುವೆಲಾ ಚೀಫ್ ಜಸ್ಟೀಸ್ ಬಂಧನಕ್ಕೆ 50 ಲಕ್ಷ ಡಾಲರ್ ಬಹುಮಾನ ಘೋಷಿಸಿದ ಅಮೆರಿಕ!
ಮಾಜಿ ನಾಯಕ ಆಸಿಮ್ ಉಮರ್ ಹತ್ಯೆಗೆ ಪ್ರತೀಕಾರ ತೀರಿಸಲು ಎಕ್ಯೂಐಎಸ್ ಹವಣಿಸುತ್ತಿದೆ. ಆಸಿಮ್ ಉಮರ್ ಹತ್ಯೆ ನಂತರದಲ್ಲಿ ಈ ಸಂಘಟನೆಯ ನೇತೃತ್ವವನ್ನು ಒಸಾಮಾ ಮಹಮೂದ್ ವಹಿಸಿಕೊಂಡಿದ್ದಾನೆ. ಈ ಸಂಘಟನೆಯು ತಾಲೀಬಾನ್ ಸಂಘಟನೆಯ ಅಧೀನ ಸಂಘಟನೆಯಾಘಿದ್ದು, ನಿಮ್ರುಝ್, ಹೆಲ್ಮಂಡ್, ಕಂದಹಾರ್ ಪ್ರಾಂತ್ಯಗಳಲ್ಲಿ ಸಕ್ರಿಯವಾಗಿದೆ. ಈ ಸಂಘಟನೆಗೂ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನಗಳಲ್ಲಿ 150-200 ಉಗ್ರ ಸದಸ್ಯರಿದ್ದಾರೆ.
ಇದನ್ನೂ ವೀಕ್ಷಿಸಿ: VIDEO: ಮಾಸ್ಕ್ ಮಹತ್ವ ಗೊತ್ತಾಗಿಲ್ವಾ, ಇದನ್ನೊಮ್ಮೆ ನೋಡಿ..
ಈ ಉಗ್ರಸಂಘಟನೆಗಳು ತಮ್ಮ ಸಂವಹನಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಆ್ಯಪ್ಗಳನ್ನು ಅವಲಂಬಿಸಿವೆ. ನೇಮಕಾತಿ, ಹಣಸಂಗ್ರಹ, ಉಗ್ರ ಕೃತ್ಯ ಅನುಷ್ಠಾನ ಎಲ್ಲವನ್ನೂ ಆ್ಯಪ್ಗಳ ಮೂಲಕ ಸಂವಹನ ನಡೆಸಿಯೇ ಮಾಡಲಾಗುತ್ತದೆ. ಡ್ರಾಪ್ ಬಾಕ್ಸ್, ಫೈಲ್ಸ್.ಎಫ್ಎಂ. ಇಂಟರ್ನೆಟ್ ಆರ್ಚಿವ್, ಮೈಕ್ರೋಸಾಫ್ಟ್ ಒನ್ಡ್ರೈವ್, ನೆಕ್ಸ್ಟ್ ಕ್ಲೌಡ್, ರಾಕಟ್.ಚಾಟ್, ವಿಮಿಯೋ ಮುಂತಾದ ವೇದಿಕೆಯನ್ನು ಉಗ್ರ ಸಂಘಟನೆಗಳು ಬಳಸಿಕೊಂಡಿವೆ. ಐಎಸ್ಐಎಸ್ ಮತ್ತು ಅಲ್ಕೈದಾ ಸಂಘಟನೆಗಳು ಈಗ ಟೆಲಿಗ್ರಾಂ ಆ್ಯಪ್ಗೆ ಪರ್ಯಾಯ ಆ್ಯಪ್ಗಳನ್ನು ಹುಡುಕತೊಡಗಿವೆ ಎಂದು ವರದಿ ಉಲ್ಲೇಖಿಸಿದೆ. (ಏಜೆನ್ಸೀಸ್)
ಆತ್ಮನಿರ್ಭರ ಭಾರತ ಪ್ಯಾಕೇಜ್ ವ್ಯಾಪ್ತಿಯಲ್ಲಿ ಇದುವರೆಗೆ 5 ಪ್ರಸ್ತಾವನೆಗಳಿಗೆ ಅಂಕಿತ