More

    ಅನುಮೋದನೆ ಪಡೆಯದೆ ನೇಮಕ, ಅನುಕಂಪದ ನೇಮಕಕ್ಕೆ ಅರ್ಹ

    ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಅ.31, 2017ಕ್ಕಿಂತ ಪೂರ್ವದಲ್ಲಿ ನೇಮಕಗೊಂಡು ಜಿಲ್ಲಾ ಪಂಚಾಯಿತಿ ಸಿಇಒಗಳಿಂದ ನೇಮಕಾತಿಗೆ ಅನುಮೋದನೆ ಪಡೆಯದೆ ಮರಣ ಹೊಂದಿದ ನೌಕರರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಕುರಿತು ಪಂಚಾಯತ್ ರಾಜ್ ಆಯುಕ್ತಾಲಯ ಆದೇಶಿಸಿದೆ.

    ಅನುಕಂಪದ ನೌಕರಿ ನೀಡುವ ಸಂದರ್ಭದಲ್ಲಿ ಅ.31,2017ಕ್ಕಿಂತ ಮುಂಚಿತವಾಗಿ ನೇಮಕಗೊಂಡಿರುವ ಬಗ್ಗೆ ಸಭಾ ನಡವಳಿಗಳನ್ನು ಸಿಬ್ಬಂದಿ ಹಾಜರಾತಿಯನ್ನು ಹಾಗೂ ವೇತನ ಪಾವತಿ ರಿಜಿಸ್ಟರ್‌ನ್ನು ಪರಿಶೀಲಿಸಿ, ಖಾತ್ರಿಪಡಿಸಿಕೊಂಡು ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts