ಎನ್‌ಎಂಎಂಎಸ್ ಆ್ಯಪ್‌ನಲ್ಲಿನ ಸಮಸ್ಯೆಯಿಂದ ಕೂಲಿಕಾರರಿಗೆ ತೊಂದರೆ

YLB PROTEST

ಯಲಬುರ್ಗಾ: ಉದ್ಯೋಗ ಖಾತ್ರಿ ಕೂಲಿಕಾರರಿಗೆ ಕೆಲಸದ ಸ್ಥಳದಲ್ಲಿ ಆಗುವ ತೊಂದರೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತರೈತ ಸಂಘದ ತಾಲೂಕು ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪಗೆ ಮನವಿ ಸಲ್ಲಿಸಲಾಯಿತು.

blank

ಸಂಘದ ರಾಜ್ಯ ಉಪಾಧ್ಯಕ್ಷ ಜಿ.ನಾಗರಾಜ ಮಾತನಾಡಿ, ನರೇಗಾ ಕೆಲಸದ ಸ್ಥಳದಲ್ಲಿ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಕೂಲಿಕಾರರ ಹಾಜರಾತಿ ತೆಗೆದುಕೊಳ್ಳುತ್ತಿದ್ದು, ಅದು ಸರಿಯಾಗಿ ನಮೂದಾಗುತ್ತಿಲ್ಲ. ಇದರಿಂದ ಕೂಲಿಕಾರರಿಗೆ ವಾರದಲ್ಲಿ ಒಂದೆರಡು ದಿನದ ಕೂಲಿ ಪಾವತಿ ಆಗುತ್ತಿಲ್ಲ. ಇದರಿಂದ ಕಾಯಕ ಬಂಧು ಮತ್ತು ಜನಗಳ ಮಧ್ಯೆ ಗಲಾಟೆಯಾಗುತ್ತಿವೆ. ಆ್ಯಪ್ ರದ್ದುಪಡಿಸಬೇಕು ಇಲ್ಲವೇ ಆ್ಯಪ್‌ನ ತೊಂದರೆ ಸರಿಪಡಿಸಲು ಗ್ರಾಪಂಗೆ ಅಧಿಕಾರ ನೀಡಬೇಕೆಂದು ಆಗ್ರಹಿಸಿದರು.

ಸಮಿತಿ ತಾಲೂಕು ಅಧ್ಯಕ್ಷ ಅಬ್ದುಲ್ ರಜಾಕ್ ಇಲಕಲ್ ಮಾತನಾಡಿ, ಫಾರಂ ನಂ.6 ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕೆಲಸ ಕೊಡಬೇಕು. ಗ್ರಾಪಂ ವ್ಯಾಪ್ತಿಯ 5 ಕಿಮೀ ಅಂತರದಲ್ಲಿ ಕೆಲಸ ನೀಡಬೇಕು. ಕೆಲಸದ ಸ್ಥಳದಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಬೇಕು.

ಕೂಲಿಕಾರರಿಗೆ ಅಳತೆ ಪ್ರಮಾಣ ನೆಪಮಾಡಿ ಕಡಿಮೆ ಕೂಲಿ ಪಾವತಿಸಲಾಗುತ್ತಿದ್ದು, ಇದನ್ನು ಸರಿಪಡಿಸಬೇಕು. ಗ್ರಾಪಂ ವ್ಯಾಪ್ತಿಯ ಕೂಲಿಕಾರರ ಸಂಖ್ಯೆಗೆ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸಿ ಎಲ್ಲ ಕುಟುಂಬದವರಿಗೂ 150 ದಿನ ಕೆಲಸ ನೀಡಬೇಕು. ಹಾಜರಾತಿ ಸಂಬಂಧ ಬಯೋಮೆಟ್ರಿಕ್ ಪದ್ಧತಿ ಜಾರಿಗೆ ಕೈಬಿಡಬೇಕೆಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಎಂ.ಸಿದ್ದಪ್ಪ, ಮಹಾದೇವಿ, ತಿರಗುಣ್ಣೆಪ್ಪ, ಶಿವರುದ್ರಪ್ಪ, ಹಾಲಪ್ಪ, ಜಗದೀಶ, ನೇತ್ರಾ, ಖಾದರ್‌ಬಿ, ಹೇಮಣ್ಣ, ಗವಿಸಿದ್ದಪ್ಪ, ಮಂಜುನಾಥ, ಬಸವರಾಜ, ವೀರೇಶ, ಸಂತೋಷ ಸೇರಿದಂತೆ ಇತರರಿದ್ದರು.

Share This Article

ದೇ ಪದೇ ಗಂಟಲು ನೋವು ಬರುತ್ತಿದೆಯೇ? ಹಾಗಾದ್ರೆ ಈ ಸುಲಭ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ | Home remedies

Home remedies: ಹವಾಮಾನ ಬದಲಾದಂತೆ ಸೋಂಕಿನ ಹರಡುವಿಕೆ ಕೂಡಾ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರು…

ಈರುಳ್ಳಿ ರಸ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ | Onion Juice

Onion Juice: ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಡುಗೆಯನ್ನು…

ನೀವು ಹೆಚ್ಚು ಬೀನ್ಸ್​​ ತಿನ್ನುತ್ತೀರಾ? ಹಾಗಾದ್ರೆ ಇದನ್ನು ತಿಳಿಯಲೇ ಬೇಕು | Beans

Beans: ಹೆಚ್ಚಿನ ಜನರಿಗೆ ಬೀನ್ಸ್ ಒಂದು ಪ್ರಮುಖ ಆಹಾರವಾಗಿದೆ. ದ್ವಿದಳ ಧಾನ್ಯಗಳ ಕುಟುಂಬಕ್ಕೆ ಸೇರಿದ ಇವು…