More

    ರೈತ ವಿರೋಧಿ ಮನಸ್ಸುಗಳು ಸರ್ವನಾಶವಾಗಲಿ ಸ್ವಾಹ…

    ರಾಣೆಬೆನ್ನೂರ: ದೆಹಲಿ ರೈತರ ಪ್ರತಿಭಟನೆ ಬೆಂಬಲಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಹೆದ್ದಾರಿ ತಡೆ ಚಳವಳಿಗೆ ರಾಣೆಬೆನ್ನೂರ ತಾಲೂಕಿನ ರೈತರು ವಿಶಿಷ್ಟ ರೀತಿಯಲ್ಲಿ ಬೆಂಬಲ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ರೈತ ವಿರೋಧಿಗಳು ಸರ್ವನಾಶವಾಗಲಿ ಎಂದು ಹೋಮ ನಡೆಸಿ ಗಮನ ಸೆಳೆದರು.

    ರೈತ ಮುಖಂಡ ವೀರಣ್ಣ ಹಲಗೇರಿ ನೇತೃತ್ವದಲ್ಲಿ ಮಾಕನೂರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆಯಿಂದ ಹೋಮಕುಂಡ ತಯಾರಿಸಿ ಕಟ್ಟಿಗೆ, ಹಾಲು ಹಾಕಿ ಹೋಮ ನಡೆಸಿದರು. ಕೇಸರಿ ಶಾಲು, ಲುಂಗಿ ಧರಿಸಿ ಬಂದಿದ್ದ ರೈತರು, ಹೋರಾಟಕ್ಕೆ ಯಶ ಸಿಗಲಿ, ಪ್ರಧಾನಿಗಳಿಗೆ ದೇವರು ಒಳ್ಳೆಯ ಬುದ್ದಿಕೊಡಲಿ, ರೈತ ವಿರೋಧಿ ನೀತಿಗಳು ಜಾರಿಯಾಗದಿರಲಿ, ರೈತ ವಿರೋಧಿ ಮನಸ್ಸುಗಳು ಸರ್ವನಾಶವಾಗಲಿ ಸ್ವಾಹ… ಎಂದು ಮಂತ್ರ ಹೇಳಿದ್ದು ಗಮನ ಸೆಳೆಯಿತು. ಹೋಮದ ನಂತರ ಪೊಲೀಸರು ಹೆದ್ದಾರಿ ತಡೆ ಕೈಬಿಡುವಂತೆ ಕೋರಿದರು. ಇದಕ್ಕೆ ರೈತರು ಸ್ಪಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts